Advertisement
ಎಸ್ಪಿ ಮತ್ತು ಅಖೀಲೇಶ್ ಯಾದವ್ರನ್ನು ಒಡೆದು ನೋಡುವ ಪ್ರಯತ್ನ ಮಾಡಿರುವ ಮೋದಿ, ತಮ್ಮ ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ಹಗರಣಗಳ ಮಾಲೆಯನ್ನು ಬಿಚ್ಚಿಟ್ಟರು.
Related Articles
Advertisement
“ಉತ್ತರ ಪ್ರದೇಶದ ಆರು 6 ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬು ಬೆಳೆಯ ಹಣವನ್ನೇ ಕೊಟ್ಟಿಲ್ಲ. ಕಾರ್ಖಾನೆಯ ಮಾಲೀಕರ ವಿರುದ್ಧವೇಕೆ ಯುಪಿ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ? ಜನ ಬಿಜೆಪಿಯನ್ನು ಬೆಂಬಲಿಸಿದರೆ ಕೇವಲ 14 ದಿನಗಳಲ್ಲಿ ಮಾಲೀಕರಿಂದ ರೈತರಿಗೆ ಹಣ ಪಾವತಿಸುವಂತೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಅಖೀಲೇಶ್ ತಿರುಗೇಟುಮೋದಿ ಅವರ ಆರೋಪಗಳಿಗೆ ಪ್ರತ್ಯುತ್ತರ ನೀಡಿದ ಅಖೀಲೇಶ್, “ನನಗೆ ಉತ್ತರ ಪ್ರದೇಶ ಬಿಟ್ಟರೆ ಬೇರೆ ಅಧಿಕಾರದತ್ತ ಗಮನವಿಲ್ಲ. ಪ್ರಧಾನಿ ಆಗುವ ಬಯಕೆಯೂ ನನಗಿಲ್ಲ. ದೆಹಲಿಯಿಂದ ದೂರವಿದ್ದಷ್ಟು ನಾನು ಖುಷಿಯಲ್ಲಿರುತ್ತೇನೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಗುಜರಾತ್ನಲ್ಲಿ ಸೋಲು ತ್ತೇನೆಂಬ ಭಯದಿಂದ ಮೋದಿ ವಾರಾಣಸಿಯ ಕಣದಲ್ಲಿ ಸ್ಪರ್ಧಿಸಿದ್ದರು. ಮೊದಲು ಈ ದೇಶದ ಜನ ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಂಬ ಅಪಾಯಕಾರಿ ಮುಖಗಳಿಂದ ಪಾರಾಗಬೇಕು’ ಎಂದು ಕರೆಕೊಟ್ಟರು. ಮತ್ತೂಮ್ಮೆ ರಮೇಶ್ ಜಾರಕಿಹೊಳಿ ಪ್ರಸ್ತಾಪ
ಈ ಹಿಂದೆ ಉ.ಪ್ರ. ಚುನಾವಣಾ ಭಾಷಣದಲ್ಲಿ ರಮೇಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದ 150 ಕೋಟಿ ರೂಪಾಯಿ ಬಗ್ಗೆ ಮೋದಿ ಪ್ರಸ್ತಾಪಿಸಿದ್ದರು. ಪುನಃ ಮೇರs…ನಲ್ಲೂ, “ಅಪನಗದೀಕರಣವನ್ನು ವಿರೋಧಿಸಿದ್ದ ಕಾಂಗ್ರೆಸ್ಗೆ ನಾನೊಂದು ಪ್ರಶ್ನೆ ಕೇಳುತ್ತೇನೆ, ನಿಮ್ಮದೇ ಕರ್ನಾಟಕ ಸರ್ಕಾರದ ಒಬ್ಬ ಸಚಿವರ ಮನೆಯಲ್ಲಿ 150 ಕೋಟಿ ರೂಪಾಯಿ ಪತ್ತೆಯಾಗಿದೆ. ಯಾಕೆ ನೀವು ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಿಲ್ಲ?’ ಎಂದು ಕೇಳಿದ್ದಾರೆ.