Advertisement

ಬೆಲ್ಲದ ಸಿಎಂ ಪೋಸ್ಟ್‌ ವೈರಲ್‌

04:09 PM Jun 14, 2021 | Team Udayavani |

ಧಾರವಾಡ: ಕಳೆದ ಒಂದು ತಿಂಗಳಿನಿಂದ ಮೇಲಿಂದ ಮೇಲೆ ದಿಲ್ಲಿ ಯಾತ್ರೆ ಕೈಗೊಂಡು ಸುದ್ದಿಯಲ್ಲಿರುವ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳು ಇದೀಗ ತಮ್ಮ ನಾಯಕ ಮುಖ್ಯಮಂತ್ರಿಯಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ.

Advertisement

ಮೊದಲು ಅರವಿಂದ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿದ್ದರು. ಆದರೆ ಈಗೀಗ ಅರವಿಂದ ಬೆಲ್ಲದ ಅವರೇ ಮುಂದಿನ ಸಿಎಂ ಎಂದು ಬರೆದುಕೊಂಡು ಪರೋಕ್ಷವಾಗಿ ಬಿಎಸ್‌ವೈಗೆ ಟಾಂಗ್‌ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಿಜೆಪಿ ಮುಖಂಡ, ಪಕ್ಷ ಸಂಘಟಕ, ಲಿಂಗಾಯತ ಯುವ ನಾಯಕ ಎಂದೆಲ್ಲ ಅರವಿಂದ ಅವರನ್ನು ಅಭಿಮಾನಿಗಳು ಹೊಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next