Advertisement

ಅರವಿಂದ ಲಿಂಬಾವಳಿ ಹಾಗೆ ಮಾಡುವ ವ್ಯಕ್ತಿಯಲ್ಲ: ಪ್ರಹ್ಲಾದ ಜೋಶಿ

10:46 PM Sep 03, 2022 | Team Udayavani |

ಧಾರವಾಡ: ಮೂರು ಬಾರಿ ಶಾಸಕರಾಗಿರುವ ಅರವಿಂದ ಲಿಂಬಾವಳಿ ಅವರಿಗೆ ಜನರ ಸಮಸ್ಯೆ ಬಗ್ಗೆ ಗೊತ್ತಿರುತ್ತದೆ. ನೈಜ ಘಟನೆ ಏನೆಂದು ತಿಳಿದು ಆ ಕುರಿತು ಪ್ರತಿಕ್ರಿಯಿಸುವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಲಿಂಬಾವಳಿ ಮಹಿಳೆಗೆ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅವರು ಹಾಗೆ ಮಾಡುವ ವ್ಯಕ್ತಿಯಲ್ಲ. ಆ ವಿಷಯವನ್ನು ಸರಿಯಾಗಿ ತಿಳಿದುಕೊಂಡು ಮಾತನಾಡುವೆ. ಸಾಮಾನ್ಯವಾಗಿ ಯಾರೇ ಮನವಿ ಕೊಡಲು ಬಂದರೆ ಮನವಿ ಪಡೆಯಬೇಕು. ಅವರೂ ಮನವಿ ಪಡೆದಿರಬಹುದು ಎಂದರು.

ಐಟಿ-ಬಿಟಿ ಕಂಪನಿಗಳಿಂದ ಸಿಎಂಗೆ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಜೋಶಿ, ಕಾಲುವೆ ಒತ್ತುವರಿ ಬಗ್ಗೆ ಸಿಎಂಗೆ ಹೇಳಿರುವ ಅವರ ಕಾಳಜಿ ಒಪ್ಪುತ್ತೇನೆ. ಆದರೆ ಎಲ್ಲರೂ ಸೇರಿ ಅತಿಕ್ರಮಣ ಮಾಡಿದ್ದಾರೆ. ಇದರಲ್ಲಿ ಐಟಿಯವರೂ ಸೇರಿ ಬೇರೆ ಬೇರೆ ಉದ್ಯಮದವರು ಇದ್ದಾರೆ. ನೀರು ಹರಿಯದಂತೆ ಕೆರೆ-ಕಾಲುವೆ ಅತಿಕ್ರಮಣ ಮಾಡಿದ್ದಾರೆ ಎಂದು ಹೇಳಿದರು.

ಪ್ರತಿ ಬಾರಿ ಸಾವಿರಾರು ಕೋಟಿ ರೂ. ರಸ್ತೆಗಾಗಿ ವೆಚ್ಚವಾಗುತ್ತಿದೆ. ಏಳೆಂಟು ಸಾವಿರ ಕೋಟಿ ರೂ. ಬೆಂಗಳೂರು ಬಜೆಟ್‌ ಇದೆ. ಜತೆಗೆ ರಾಜ್ಯ ಸರ್ಕಾರವೂ ಬೆಂಗಳೂರಿಗೆ ಬಹಳ ಮಹತ್ವ ಕೊಟ್ಟಿದೆ. ಆದರೆ ಈಗ ಅತಿಕ್ರಮಣ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದಾರೆ. ನೀರು ಒಂದು ಕಡೆ ನಿಂತು ರಸ್ತೆ ಹಾಳಾಗುತ್ತಿವೆ. ಈ ಕುರಿತು ಶುಕ್ರವಾರ ಮುಖ್ಯಮಂತ್ರಿ ಜತೆಗೆ ಮಾತನಾಡಿದ್ದೇನೆ. ಸಿಎಂ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next