Advertisement

ಅರಂತೋಡು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತೆಂಗಿನ ಮರ ಬಿದ್ದು ಮಹಿಳೆ ಸಾವು

09:56 PM Dec 07, 2022 | Team Udayavani |

ಅರಂತೋಡು: ತೆಂಗಿನ ಮರಬಿದ್ದು ಗಂಭೀರ ಗಾಯಗೊಂಡಿದ್ದ ಅರಂತೋಡಿನ ಮಹಿಳೆಯೊಬ್ಬರು ಬುಧವಾರ ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಮೃತ ಮಹಿಳೆಯನ್ನು ಅರಂತೋಡಿನ ಕಮಲ(62 ವರ್ಷ) ಎನ್ನಲಾಗಿದೆ.

ಅರಂತೋಡು ಉಳುವಾರು ಮೇದಪ್ಪ ಗೌಡರ ತೋಟದಲ್ಲಿ ಕೊಡೆಂಕಿರಿಯ ಬಾಲಣ್ಣರವರ ಪತ್ನಿ ಕಮಲರವರು ಅಡಿಕೆ ಹೆಕ್ಕುತ್ತಿದ್ದಾಗ ಒಣಗಿದ ತೆಂಗಿನ ಮರವೊಂದು ಕಮಲರವರ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು ಕೂಡಲೇ ಸ್ಥಳಕ್ಕೆ ಬಂದ ಮೇದಪ್ಪ ಅವರು ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಂತರ ವಾಪಾಸ್ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ . ಮೃತರು ಪುತ್ರ ಚಿದಾನಂದ , ಪುತ್ರಿ ತಾರಾಮಣಿಯವರನ್ನು ಅಗಲಿದ್ದಾರೆ.

ಇದನ್ನೂ ಓದಿ: ಪತ್ನಿಯ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹೆಗಲ ಮೇಲೆ ಹೊತ್ತೋಯ್ದ ಗಂಡ…

Advertisement
Advertisement

Udayavani is now on Telegram. Click here to join our channel and stay updated with the latest news.

Next