Advertisement

Sirsi: ಡಿ.16 ರಂದು ಆರಾಧನಾ ಮಹೋತ್ಸವ

03:57 PM Dec 15, 2023 | Team Udayavani |

ಶಿರಸಿ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಡಿ.16 ರ ಶನಿವಾರದಂದು ಸೋಂದಾದ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನೆರವೇರಲಿದೆ.

Advertisement

ಅಂದು ಬೆಳಿಗ್ಗೆ 5.30 ಗಂಟೆಯಿಂದ ಶ್ರೀ ಗುರುಮೂರ್ತಿಯಲ್ಲಿ ಶತರುದ್ರ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಆರಾಧನಾ ಕಾರ್ಯಕ್ರಮಗಳು ಜರುಗಲಿದ್ದು, ನಂತರ ತೀರ್ಥ-ಪ್ರಸಾದ ವಿತರಣೆ ನಡೆಯಲಿದೆ.

ಅದೇ ದಿನ ಸಾಯಂಕಾಲ 5 ಗಂಟೆಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಗಾಯನದಲ್ಲಿ ಸರಾಫ ಬಝಾರ್ ನ ಪ್ರದೀಪ ಎಲ್ಲನಕರ್  ಶಿರಸಿ, ಹಾರ್ಮೋನಿಯಂನಲ್ಲಿ ವಿ. ಪ್ರಕಾಶ ಹೆಗಡೆ, ಯಡಳ್ಳಿ, ತಬಲಾದಲ್ಲಿ ಸುಧಾಕರ ನಾಯ್ಕ, ಶಿರಸಿ, ಕೀ ಬೋರ್ಡ್‌ನಲ್ಲಿ ಕೆ. ಪಿ. ಹೆಗಡೆ ದಾಸನಕೊಪ್ಪ, ರಿದಂ ಪ್ಯಾಡ್‌ನಲ್ಲಿ ಕಿರಣ ಹೆಗಡೆ ಕಾನಗೋಡು, ಕೊಳಲು ವಾದನದಲ್ಲಿ ವಿನಾಯಕ ಶಿರಾಲಿ ಸಹಕರಿಸಲಿದ್ದಾರೆ.

ಅಂದು ನಡೆಯುವ ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ವರೂ ಆಗಮಿಸಿ, ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ಗುರು-ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next