Advertisement

ಗುಡ್ಡೇನಹಳ್ಳಿಯಲ್ಲಿ ಅಪ್ಪು ನೆನಪಿನಲ್ಲಿ ಆರೋಗ್ಯ ಶಿಬಿರ

05:20 PM Nov 30, 2021 | Team Udayavani |

ಹಾಸನ: ನಗರದ ಗುಡ್ಡೇನಹಳ್ಳಿ ಬಳಿ ಪುನೀತ್‌ ರಾಜಕುಮಾರ್‌ ಅಭಿಮಾನಿಗಳ ಸಂಘ, ಹಾಸನ ವೈದ್ಯಕೀಯ ಆಸ್ಪತ್ರೆ ಹಾಗೂ ವಿಜ್ಞಾನಗಳ ಸಂಸ್ಥೆ ವತಿಯಿಂದ ಅಪ್ಪು ನಮನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಇಸಿಜಿ ಸ್ತನ ಕ್ಯಾನ್ಸರ್‌ ಮತ್ತು ತಪಾಸಣೆ, ಇ-ಶ್ರಮ್‌ ಆರೋಗ್ಯ ಕಾರ್ಡ್‌ ವಿತರಣೆ ಶಿಬಿರ ಯಶಸ್ವಿಯಾಗಿ ನಡೆಯಿತು.

Advertisement

ಕಾರ್ಯಕ್ರಮಕ್ಕೆ ಮೊದಲು ಯುವರತ್ನ ಪುನೀತ್‌ ರಾಜಕುಮಾರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಕರ್ನಾಟಕ ಕಂಡ ಅತ್ಯಂತ ಜನಪ್ರಿಯ ವ್ಯಕ್ತಿಯಾದ ಪುನೀತ್‌ ರಾಜ್‌ ಕುಮಾರ್‌ ನೆನಪಿನಲ್ಲಿ ಆರೋಗ್ಯ ತಪಾಸಣೆ ಸೇರಿದಂತೆ ಸಮಾಜ ಸೇವೆಯಂತಹ ಒಳ್ಳೆಯ ಕೆಲಸವನ್ನು ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕಲಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಇದನ್ನೂ ಓದಿ;- ಕೊರೊನಾ ಅಪಾಯ ಭತ್ಯೆ ನೀಡಲು ಒತ್ತಾಯ

ಕಾರ್ಯಕ್ರಮದಲ್ಲಿ ಗುಡ್ಡೆನಹಳ್ಳಿ ಗ್ರಾಮದ ಮಣಿಚನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೇಶವಮೂರ್ತಿ, ಮುಖಂಡರಾದ ಜಿ.ಎಸ್‌. ಸತೀಶ್‌, ಗ್ರಾಪಂ ಮಾಜಿ ಸದಸ್ಯ ರಂಗಸ್ವಾಮಿ, ಜನಾರ್ಧನ್‌, ಮಧು, ರವಿಕುಮಾರ್‌, ಪ್ರತಾಪ್‌, ವಿವೇಕ್‌, ಶರತ್‌, ವೇದಶ್ರಿ, ಕಲಾವತಿ ಮಧುಸೂದನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next