Advertisement

ಸಮಾಜ ಸೇವಕರನ್ನು ಗೌರವಿಸುವುದು ಶ್ಲಾಘನೀಯ: ಗಣೇಶ್‌ ಮಲ್ಯ

02:12 PM Oct 05, 2017 | Team Udayavani |

ಕಿನ್ನಿಗೋಳಿ: ಸದ್ದಿಲ್ಲದೆ ತನ್ನ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಸಾಹಿತಿ ಕೆ.ಗಣೇಶ್‌ ಮಲ್ಯ ಹೇಳಿದರು.

Advertisement

ಅವರು ಅ. 4ರಂದು ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಅಂಬಾ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕತೆಗೆ ಹೆಚ್ಚಿನ ಒತ್ತುಕೊಟ್ಟು ಕಿನ್ನಿಗೋಳಿಯಲ್ಲಿ ಜಿಎಸ್‌ಬಿ ಸಮಾಜದವರನ್ನು ಸಂಘಟಿಸುವಲ್ಲಿ ಹಾಗೂ ಸಮಾಜದ ಬಗ್ಗೆ ಕಳಕಳಿಯ ಸೇವಾ ಮನೋಭಾವ ಮೂಲಕ ಗುರುತಿಸಿ ಕೊಂಡವರು ಅಂತಹ ವ್ಯಕ್ತಿಗಳನ್ನು ಗೌರವಿಸುತ್ತಿರುವುದು ಇತರರಿಗೂ ಪ್ರೇರಣೆ ಆಗಲಿ ಎಂದು ಹೇಳಿದರು.

ಕಿನ್ನಿಗೋಳಿಯ ಜಿಎಸ್‌ಬಿ ಹಿರಿಯ ಮುಂದಾಳು ಕೆ. ಅಚ್ಯುತ ಮಲ್ಯ, ಹಾಗೂ ಸುರೇಂದ್ರನಾಥ ಶೆಣೈ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಟ್ರಸ್ಟಿ ಉಮೇಶ್‌ ರಾವ್‌ ಎಕ್ಕಾರು, ಗೋಪಿನಾಥ ಶೆಣೈ, ಡಾ| ಪ್ರಶಾಂತ್‌, ಹೇಮನಾಥ್‌ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಕೆ. ಪುಂಡಲೀಕ ಮಲ್ಯ ಪ್ರಸ್ತಾವನೈಗೈದು ಸ್ವಾಗತಿಸಿದರು. ನಿವೃತ್ತ ಶಿಕ್ಷಕ ವಾಸುದೇವ ಶೆಣೈ
ಕಾರ್ಯುಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next