Advertisement

ನೇಮಕ: ಸಂಪಂಗಿಗೆ ಮುಖಭಂಗ

07:03 AM Jun 09, 2020 | Team Udayavani |

ಬಂಗಾರಪೇಟೆ: ಪಟ್ಟಣದಲ್ಲಿನ ಎಪಿಎಂಸಿಗೆ ಮೂರನೇ ಬಾರಿಗೆ ನಾಮನಿರ್ದೇಶಿತ ಸದಸ್ಯರನ್ನು ಬದಲಾವಣೆ ಮಾಡಿ ಆದೇಶ ಮಾಡಿದೆ. ನೇಮಕ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಶಾಸಕ  ಬಿ.ಪಿ.ವೆಂಕಟಮುನಿಯಪ್ಪ ಬೆಂಬಲಕ್ಕೆ ನಿಂತಿದ್ದು, ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಜಿಪಂ ಸದಸ್ಯ ಜಯಪ್ರಕಾಶ ನಾಯ್ಡುಗೆ ಮುಖಭಂಗವಾಗಿದೆ.

Advertisement

ಜೂ.10 ರಂದು ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದ್ದು,  ಅಧಿಕಾರ ಹಿಡಿಯಲು ಬಿಜೆಪಿ ಲಾಬಿ ಮಾಡುತ್ತಿದೆ. ಬಿಜೆಪಿಯಿಂದ ಗೆದ್ದಿರುವ 6 ಸದಸ್ಯರ ಜೊತೆಗೆ ಬಹುಮತಕ್ಕಾಗಿ ಸರ್ಕಾರದ ಮೂವರು ನಾಮನಿರ್ದೇಶಿತ ಸದಸ್ಯರ ಅಗತ್ಯವಿದೆ. ಇದರಿಂದ ಇಬ್ಬರು ಮಾಜಿ ಶಾಸಕರ ನಡುವಿನ  ರಾಜಕೀಯ ಪೈಪೋಟಿಗೆ ರಾಜ್ಯ ಬಿಜೆಪಿಯಲ್ಲಿ ಗೊಂದಲ ಉಂಟಾಗಿತ್ತು.

ಮೊದಲ ಬಾರಿಗೆ ಆದೇಶ: ಹಿಂದಿನಿಂದಲೂ ಮೂರು ನಾಮನಿರ್ದೇಶನ ಸ್ಥಾನಗಳಲ್ಲಿ ಬಂಗಾರಪೇಟೆ ತಾಲೂಕಿಗೆ ಎರಡು, ಕೆಜಿಎಫ್ಗೆ ಒಂದು ಸ್ಥಾನ ಬಿಟ್ಟುಕೊಡಲಾಗುತ್ತಿತ್ತು. ಅದರಂತೆ ಸರ್ಕಾರ ಜೂ.1ರಂದು ಬಂಗಾರಪೇಟೆ  ತಾಲೂಕಿನಿಂದ ಕೆ.ಸಿ.ಸೀತಾರಾಮಪ್ಪ, ಎಂ.ವಿ.ಚಂದ್ರಕಲಾ ಹಾಗೂ ಕೆಜಿಎಫ್ ತಾಲೂಕಿಂದ ಅಮರನಾರಾಯಣರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.

ಇದರಿಂದ ಬೇಸರಗೊಂಡ ವೈ.ಸಂಪಂಗಿ ಹಾಗೂ ಜಿಪಂ ಸದಸ್ಯ  ಜಯಪ್ರಕಾಶ ನಾಯ್ಡು ಸಂಸದ ಎಸ್‌. ಮುನಿಸ್ವಾಮಿ ಶಿಫಾರಸು ಮೂಲಕ ಬಂಗಾರಪೇಟೆಗೆ ನೀಡಿದ್ದ ಎರಡು ನಾಮನಿರ್ದೇಶಿತ ಸದಸ್ಯರನ್ನು ರದ್ದು ಮಾಡಿಸಿ, ರಾಮಸಾಗರ ಹೇಮಾರೆಡ್ಡಿ ಹಾಗೂ ತೊಂಗಲಕುಪ್ಪ ಮಂಗಮ್ಮರನ್ನು ನೇಮಿಸಲಾಗಿತ್ತು. ಇದರ ವಿರುದ ಬಂಡೆದ್ದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಕೆಲವು ರಾಜ್ಯ ಬಿಜೆಪಿ ಮುಖಂಡರ ಸಹಕಾರದೊಂದಿಗೆಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರನ್ನು ನೇರವಾಗಿ ಭೇಟಿಯಾಗಿ, ಜಿಲ್ಲಾ ಬಿಜೆಪಿ  ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರನ್ನು ಕಡೆಗಣಿಸಲಾಗಿರುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದರು.

ಬಂಗಾರಪೇಟೆ ಎಪಿಎಂಸಿ ಸುಲಭವಾಗಿ ಬಿಜೆಪಿ ಪಾಲಾಗುತ್ತಿರುವುದನ್ನು ತಪ್ಪಿಸಲು ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ ನಾಮನಿರ್ದೇಶಿತ  ಸ್ಥಾನಗಳ ಬದಲಾವಣೆ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದ್ದಾರೆ ಎನ್ನಲಾಗಿದೆ. ಕಳೆದ 10 ವರ್ಷಗಳಲ್ಲಿ ಎರಡು ಬಾರಿ ಬಿಜೆಪಿಗೆ ಅಧಿಕಾರವನ್ನು  ತಪ್ಪಿಸುವ ದುರುದ್ದೇಶದಿಂದ ಕಾಂಗ್ರೆಸ್‌ ಬೆಂಬಲಿತ ಸದಸ್ಯರೊಂದಿಗೆ ಶಾಮೀಲಾಗಿದ್ದರಿಂದ ಒಂದು ಬಾರಿ ಅಧ್ಯಕ್ಷ ಸ್ಥಾನ ಹಾಗೂ ಒಂದು ಬಾರಿ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿರುವ ವಿಚಾರಗಳನ್ನೂ ರಾಜ್ಯ ಬಿಜೆಪಿ ಹೈಕಮಾಂಡ್‌ಗೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ  ಎನ್ನಲಾಗಿದೆ.

Advertisement

ಜೂ.6ರಂದು ಆದೇಶದಂತೆ ನೇಮಿಸಿದ್ದ ರಾಮಸಾಗರ ಹೇಮಾರೆಡ್ಡಿ ಹಾಗೂ ತೊಂಗಲಕುಪ್ಪ ಮಂಗಮ್ಮ ಅವರ ನೇಮಕವನ್ನು ರಾಜ್ಯ ಸರ್ಕಾರ ರದ್ದು ಮಾಡಿ, ಮೊದಲ ಆದೇಶ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next