Advertisement

ಕೆಪಿಸಿಸಿ ವಕ್ತಾರ, ಮುಖ್ಯ ವಕ್ತಾರರ ನೇಮಕ; ಐವನ್‌ ಡಿ’ಸೋಜಾ ಸಹಿತ 40 ಮಂದಿ ವಕ್ತಾರರು

11:30 PM Sep 25, 2022 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರವಿವಾರ ಪಕ್ಷದ ವಕ್ತಾರ, ಮುಖ್ಯ ವಕ್ತಾರರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Advertisement

ಕೆಪಿಸಿಸಿ ಮುಖ್ಯ ವಕ್ತಾರರ ಪಟ್ಟಿಯಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡರಾದ ಬಿ.ಎಲ್‌. ಶಂಕರ್‌, ವಿ.ಎಸ್‌. ಉಗ್ರಪ್ಪ, ವಿ.ಆರ್‌. ಸುದರ್ಶನ್‌, ಪ್ರೊ| ಬಿ.ಕೆ. ಚಂದ್ರಶೇಖರ್‌, ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್‌, ಪ್ರಕಾಶ್‌ ರಾಥೋಡ್‌, ಎಚ್‌.ಎಂ. ರೇವಣ್ಣ , ಮೋಟಮ್ಮ ಸೇರಿ ಹಲವು ಮಂದಿ ಸ್ಥಾನ ಪಡೆದಿದ್ದಾರೆ.

ಪಕ್ಷದ ವಕ್ತಾರರ ಸ್ಥಾನಕ್ಕೆ 40 ಮುಖಂಡರನ್ನು ಆಯ್ಕೆ ಮಾಡಲಾಗಿದೆ. ಸಂವಹನ ರಾಜ್ಯ ಸಮಿತಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 20 ಮಂದಿ ಸ್ಥಾನ ಪಡೆದಿದ್ದಾರೆ.

ಕೆಪಿಸಿಸಿ ಮುಖ್ಯ ವಕ್ತಾರರು
ಬಿ.ಎಲ್‌. ಶಂಕರ್‌, ವಿ.ಎಸ್‌. ಉಗ್ರಪ್ಪ, ಆರ್‌.ವಿ. ಸುದರ್ಶನ್‌, ಪ್ರೊ| ಬಿ.ಕೆ. ಚಂದ್ರಶೇಖರ್‌, ಜಿ.ಸಿ. ಚಂದ್ರಶೇಖರ್‌, ಡಾ| ಎಲ್‌. ಹನುಮಂತಯ್ಯ, ಪ್ರಕಾಶ್‌ ರಾಥೋಡ್‌, ಮೋಟಮ್ಮ, ಎಚ್‌.ಎಂ. ರೇವಣ್ಣ, ಬಿ.ಎನ್‌. ಚಂದ್ರಪ್ಪ, ಐವನ್‌ ಡಿ’ಸೋಜಾ, ಡಿ.ಆರ್‌. ಪಾಟೀಲ್‌, ಆರ್‌.ವಿ. ವೆಂಕ ಟೇಶ್‌, ಎಂ. ನಾರಾಯಣಸ್ವಾಮಿ, ಜಲಜಾ ನಾಯಕ್‌, ಪಿ.ಆರ್‌. ರಮೇಶ್‌, ಪ್ರೊ| ಕೆ.ಈ. ರಾಧಾಕೃಷ್ಣ, ಸಿ. ನಾರಾಯಣ ಸ್ವಾಮಿ, ನಂಜಯ್ಯನ ಮಠ್, ಪ್ರೊ| ದ್ವಾರಕನಾಥ್‌, ಶಂಕರ್‌ ಗುಹಾ, ಧರ್ಮಸೇನಾ, ವೆಂಕಟೇಶ್‌, ನಿವೇದಿತ್‌ ಆಳ್ವ, ನಿಕೇತ್‌ ರಾಜ್‌, ಎಸ್‌.ಎ. ಹುಸೈನ್‌ ಮತ್ತು ನಟರಾಜ್‌ ಗೌಡ.

Advertisement

Udayavani is now on Telegram. Click here to join our channel and stay updated with the latest news.

Next