Advertisement
ಮಾರ್ಚ್ನಲ್ಲಿ ಎಂಒಪಿಯನ್ನು ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂನ ಮುಖ್ಯಸ್ಥರಾದ ಸಿಜೆಐ ಜೆ.ಎಸ್. ಖೇಹರ್ ಅವರು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿ ಕೊಟ್ಟಿದ್ದು, ಪಿಎಂಒ ಇನ್ನೂ ಕಾನೂನು ಸಚಿವಾಲಯದೊಂದಿಗೆ ಚರ್ಚಿಸಿಲ್ಲ. ಕಾರಣ, ನೂತನ ಕರಡಿನಲ್ಲಿ ಇನ್ನಾವುದೇ ಬದಲಾವಣೆ ನಡೆಸುವುದಿಲ್ಲ ಎಂದು ಕೊಲಿಜಿಯಂ ಸ್ಪಷ್ಟವಾಗಿ ಹೇಳಿದ್ದು, ಈ ವಿಚಾರದಲ್ಲಿ ಮುಂದಿನ ಪ್ರಕ್ರಿಯೆಗೆ ಸರಕಾರದ ಹೊಣೆಗೊಪ್ಪಿಸಿದೆ. 2015ರಲ್ಲಿ ಸುಪ್ರೀಂನ ಸಾಂವಿಧಾನಿಕ ಪೀಠ ತೀರ್ಪು ನೀಡಿದ್ದು, ಕರಡು ನಿರ್ಮಿತಿ ವಿಚಾರದಲ್ಲಿ ಕೇಂದ್ರದೊಂದಿಗೆ ಚರ್ಚಿಸಿ ಮುಂದುವರಿಯಬೇಕೆಂಬ ಆದೇಶದ ಮೇರೆಗೆ ಕೊಲಿಜಿಯಂ 3ನೇ ಬಾರಿಗೆ ಎಂಒಪಿ ಕರಡನ್ನು ಸರಕಾರದ ಮುಂದಿಟ್ಟಿದೆ. ಕೊಲಿಜಿಯಂ ಹೊಸ ಎಂಒಪಿ ಕಳಿಸಿರುವುದರಿಂದ ಕೇಂದ್ರ ಇನ್ನೂ ನಿರ್ಧಾರ ಕೈಗೊಳ್ಳದೇ ಮಗುಮ್ಮಾಗಿ ಕೂತಿದೆ. Advertisement
ನ್ಯಾಯಾಧೀಶರ ನೇಮಕ: ಇನ್ನೂ ನಿರ್ಧರಿಸದ ಕೇಂದ್ರ
03:45 AM Jun 26, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.