Advertisement

ವಕೀಲರ ಪರಿಷತ್‌ಗೆ 25 ಹೊಸ ನಿರ್ದೇಶಕರ ನೇಮಕ

01:13 PM Jul 12, 2018 | |

ಬೆಂಗಳೂರು: ರಾಜ್ಯ ವಕೀಲ ಪರಿಷತ್‌ ನ ಆಡಳಿತ ಮಂಡಳಿಯ 25 ನಿರ್ದೇಶಕರ ಹುದ್ದೆಗಳಿಗೆ ನಡೆದಿದ್ದ
ಚುನಾವಣೆಯ ಫ‌ಲಿತಾಂಶ ಪ್ರಕಟಗೊಂಡಿದೆ. ಹಿರಿಯ ವಕೀಲರಾದ ವೈ.ಆರ್‌. ಸದಾಶಿವರೆಡ್ಡಿ, ವಕೀಲ ಪಿ.ಪಿ.ಹೆಗ್ಡೆ ಸೇರಿ 25 ಮಂದಿ ವಕೀಲರು ನಿರ್ದೇಶಕರ ಹುದ್ದೆಗೆ ಚುನಾಯಿತರಾಗಿದ್ದಾರೆ. ನಿರ್ದೇಶಕರ ಅಧಿಕಾರಾವಧಿ ಐದು ವರ್ಷವಾಗಿದ್ದು, ಈ 25 ನಿರ್ದೇಶಕರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನೇಮಕ ನಡೆಯಲಿದೆ.

Advertisement

ವಕೀಲರಾದ ಕಿವದ್‌ ಕಲ್ಮೇಶ್ವರ್‌ ತುಕಾರಾಂ, ಎಂ.ದೇವರಾಜ್‌, ಎಚ್‌. ಎಲ್‌.ವಿಶಾಲ್‌ ರಘು, ಎನ್‌. ಶಿವಕುಮಾರ್‌, ಆರ್‌.ರಾಜಣ್ಣ, ಕಮ್ಮರಡ್ಡಿ ವೆಂಕರಡ್ಡಿ ದೇವರೆಡ್ಡಿ, ಎಲ್‌. ಶ್ರೀನಿವಾಸ ಬಾಬು, ಬಿ.ವಿ.ಶ್ರೀನಿವಾಸ, ನಾಯ್ಕ ಕೃಷ್ಣಪ್ಪ ಭೀಮಪ್ಪ, ಆಸೀಫ್ ಅಲಿ ಶಾಹಿಕ್‌ ಹುಸೇನ್‌, ಎಸ್‌.ಎಫ್. ಗೌತಮ್‌ ಚಂದ, ಎಸ್‌.ಎಲ್‌ .ಬೋಜೇಗೌಡ, ಬಿ.ಆರ್‌. ಚಂದ್ರಮೌಳಿ, ಮೋಟಕಪಲ್ಲಿ ಕಾಶಿನಾಥ್‌, ಮಗªಮ್‌ ಆನಂದ ಕುಮಾರ್‌ ಅಪ್ಪು, ಮುನಿಯಪ್ಪ, ಎಸ್‌. ಬಸವರಾಜು, ಜೆ.ಎಂ.ಅನೀಲ್‌ ಕುಮಾರ್‌, ಎಸ್‌.ಹರೀಶ್‌, ಮಂಗಲ್‌ ಕೆರೆ ವಿನಯ್‌ ಬಾಳಾ ಸಾಹೇಬ್‌, ಕಂಡಿಮಲ್ಲಕೋಟೇಶ್ವರ ರಾವ್‌, ಎಂ.ಎನ್‌.ಮಧುಸೂದನ್‌, ಮಿಟ್ಟಲ್‌ ಕೋಡ್‌ ಸಿದ್ದಲಿಂಗಪ್ಪ ಶೇಖರಪ್ಪ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next