Advertisement

ಉಚಿತ ಸಾಮೂಹಿಕ ವಿವಾಹಕ್ಕೆ ಸಿದ್ದರಬೆಟ್ಟ ಶ್ರೀಗಳಿಂದ ಅರ್ಜಿ ಆಹ್ವಾನ

06:00 PM Mar 28, 2023 | Team Udayavani |

ಕೊರಟಗೆರೆ : ತಾಲೂಕಿನ ಸಿದ್ದರಬೆಟ್ಟ ಶ್ರೀ ರಂಭಾಪುರಿ ಶಾಸಾ ಶಾಖಾ ಮಠದ 17ನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಸಾಮೂಹಿಕ ಆದರ್ಶ ವಿವಾಹ ಹಾಗೂ ಜನ ಜಾಗೃತಿ ಧರ್ಮ ಸಮಾವೇಶವನ್ನು ಹಮ್ಮಿಕೊಂಡಿದ್ದು ವಿವಾಹವಾಗಲು ಬಯಸುವ ವಧು-ವರರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಅವರು ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾಹಿತಿ ನೀಡಿ ರಂಭಾಪುರಿ ವೀರ ಸಿಂಹಾಸನದ ಪೀಠಾಧ್ಯಕ್ಷರಾದ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಸಿದ್ದರಬೆಟ್ಟದ ಶ್ರೀ ರಂಭಾಪುರಿ ಶಾಸಾ ಶಾಖಾ ಮಠದ 17ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿರುವ ಉಚಿತ ಸಾಮೂಹಿಕ ಆದರ್ಶ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾವೇಶದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ,ಈ ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ಬಯಸುವ ಪ್ರಾಯಸ್ತ ನೂತನ ವಧು-ವರರು ಅಥವಾ ಸಂಬಂಧಿಸಿದ ಪೋಷಕರುಗಳು ಮಾತಾ-ಪಿತರು ಮೇ.31 ರೊಳಗೆ ಅಗತ್ಯ ದಾಖಲಾತಿಗಳನ್ನು ಶ್ರೀಮಠದಲ್ಲಿ ಸಲ್ಲಿಸಿ ನೊಂದಾಯಿಸಿಕೊಳ್ಳುವುದು, ನಂತರದಲ್ಲಿ ಬರುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದರು.

ಇದನ್ನೂ ಓದಿ: ಅನುಮತಿ ಇಲ್ಲದೆ ದರ್ಗಾ ನವೀಕರಣಕ್ಕೆ ಮುಂದಾದ ಮುಸ್ಲಿಮರು : ವಾಗ್ವಾದ

ನೀಡಬೇಕಾದ ದಾಖಲಾತಿಗಳು:

ವಧು-ವರರ ಪ್ರತ್ಯೇಕ ತಲಾ 3 ಭಾವಚಿತ್ರಗಳು, ಜನ್ಮದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ ಅಥವಾ ಶಾಲಾ ದಾಖಲಾತಿ ಸರ್ಟಿಫೀಕೆಟ್, ವಾಸಸ್ಥಳದ ಬಗ್ಗೆ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ, ವಧು-ವರನದು ಪ್ರಥಮ ವಿವಾಹ ಎಂಬ ಬಗ್ಗೆ ಮಾತಾ-ಪಿತರಿಂದ ದೃಡೀಕರಣ ಪತ್ರ ನೀಡುವುದು ಖಡ್ಡಾಯವಾಗಿದೆ, ಹೆಚ್ಚಿನ ಮಾಹಿತಿಗಾಗಿ ಸಿದ್ದಗಿರಿ ನಂಜುಂಡ ಸ್ವಾಮಿ 9449698466 , ಸಂಪರ್ಕಿಸುವಂತೆ ಹಾಗೂ ಖುದ್ದಾಗಿ ಸಿದ್ದರಬೆಟ್ಟದ ಶ್ರೀಮಠದಲ್ಲಿ ಸಂಪರ್ಕಿಸುವುದು ಎಂದು ತಿಳಿಸಿದ್ದಾರೆ.

Advertisement

ಪತ್ರಿಕಾ ಗೋಷ್ಠಿಯಲ್ಲಿ ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಿದ್ದಮಲ್ಲಪ್ಪ, ಜಿ.ಪಂ.ಮಾಜಿ ಸದಸ್ಯೆ ಕುಸುಮಾ ಜಗನ್ನಾಥ್, ಪ.ಪಂ.ಮಾಜಿ ಸದಸ್ಯ ಲಕ್ಷ್ಮೀದೇವಮ್ಮ, ಜಿ.ಎಸ್.ಎಂ.ರಘು, ಚಿನ್ನವೆಂಕಟಶೆಟ್ಟಿ, ನಟರಾಜು, ಸಿದ್ದಗಿರಿ ನಂಜುಂಡ ಸ್ವಾಮಿ, ಮಂಜುನಾಥ್, ಶಿವಕುಮಾರ್, ಜಗನ್ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next