Advertisement

Retired Police Officer ಶಾಂತಕುಮಾರ್ ರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮನವಿ

07:29 PM Aug 11, 2023 | Team Udayavani |

ಗಂಗಾವತಿ: ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎಸ್. ಶಾಂತಕುಮಾರ ಅವರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರ ನೇತೃತ್ವದ ನಿಯೋಗ ಸಿಎಂ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

Advertisement

ಈ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಗಂಗಾವತಿ ನಗರ ಠಾಣೆ, ಗ್ರಾಮೀಣ ವೃತ್ತದಲ್ಲಿ ಪಿಐ, ಸಿಪಿಐ ಆಗಿ ಸುಧೀರ್ಘಸೇವೆ ಸಲ್ಲಿಸಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಸಂಯೋಜಕರಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಗಮ ಮಂಡಳಿ ನೇಮಕಾತಿಯಲ್ಲಿ ಶಾಂತಕುಮಾರ ಅವರಿಗೆ ಪ್ರಾಶಸ್ತ್ಯ ನೀಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಇವರ ಸಂಘಟನಾ ಶಕ್ತಿ ಪಕ್ಷಕ್ಕೆ ತುಂಬಾ ಅವಶ್ಯವಿದೆ. ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಜನಮೆಚ್ಚಿದ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ನಿಗಮ ಮಂಡಳಿ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜನಗಂಡೆಪ್ಪ ಪೂಜಾರಿ ಸಿದ್ದಾಪುರ, ಕೆ. ಮಲ್ಲಪ್ಪ, ದೊಡ್ಡಪ್ಪ ದೇಸಾಯಿ, ಅಮರೇಶ ಗೋನಾಳ , ಬಸವರಾಜ ನೀರಗಂಟಿ, ಪ್ರಕಾಶ್ ಬಾವಿ, ನಾಗೇಶ್ ಸಿಂಧನೂರು ಅಗರೆಪ್ಪ ಕೊಟ್ನೆಕಲ್, ಲಿಂಗರಾಜು. ಕಾರಮಿಂಚಪ್ಪ ಬಿ.ಫಕೀರಯ್ಯ, ಬೀರಪ್ಪ, ಅಯ್ಯಪ್ಪ ಡಣಾಪುರ, ಅಮರೇಶ ಬರಗೂರು, ದೇವಪ್ಪ ಬಾವಿಕಟ್ಟೆ, ಯಂಕಪ್ಪ ಜಾಲಿಹಾಳ, ಶಿವಮೂರ್ತಿ ನಂದಿಹಳ್ಳಿ, ಬಿ. ದ್ಯಾಮಣ್ಣ ಆಚಾರ್ ನರಸಾಪುರ ಸೂರ್ಯಕಾಂತ ಸಿದ್ದಾಪುರ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next