Advertisement

ಉತ್ಸಾಹದಿಂದ ಭಾಗವಹಿಸಿ, ಎಲ್ಲರೂ ಮತ ಚಲಾಯಿಸಿ: ಮುಖ್ಯ ಚುನಾವಣ ಆಯುಕ್ತ ಮನವಿ

12:04 AM May 10, 2023 | Team Udayavani |

ಬೆಂಗಳೂರು: ಬುಧವಾರ ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಉತ್ಸಾಹದಿಂದ ಭಾಗವಹಿಸಿ ಮತದಾನ ನಡೆಸುವಂತೆ ಕೇಂದ್ರ ಚುನಾವಣ ಆಯೋಗದ ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ಮನವಿ ಮಾಡಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪೂರಕ ಮತಗಟ್ಟೆಗಳೂ ಸೇರಿದಂತೆ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅರ್ಹ ಮತದಾರರು ಮತದಾನ ಮಾಡಬೇಕು ಎಂದು ಅವರು ಕೋರಿದ್ದಾರೆ.

ರಾಜ್ಯದಲ್ಲಿ 11.71 ಲಕ್ಷ ಹೊಸ ಮತದಾರರು ಸೇರಿದಂತೆ ಒಟ್ಟು 5.3 ಕೋಟಿ ಮತದಾರರು ಬುಧವಾರ ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ನಗರ ಮತದಾರರು ಉತ್ಸಾಹ ತೋರಿ: ಬೆಳಗಾವಿ ಜಿÇÉೆಯ 103 ವಯಸ್ಸಿನ ಶ್ರೀಮಹಾದೇವ ಮಹಾಲಿಂಗ ಮಾಲಿಯಂತಹ ಹಿರಿಯ ಮತದಾರರಿಂದ ಸ್ಪೂರ್ತಿ ಪಡೆದು, ದೇಶದ ಐಟಿ ರಾಜಧಾನಿಯಲ್ಲಿ ಯುವ ಮತ್ತು ನಗರ ಮತದಾರರು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯರಾಗಿ ಭಾಗವಹಿಸುವ ಮೂಲಕ ರಾಜ್ಯದಲ್ಲಿ ಮತದಾನದೆಡೆಗೆ ಇರುವ ನಗರ ಮತದಾರರ ನಿರಾಸಕ್ತಿಯ ಧೋರಣೆಯನ್ನು ಹುಸಿಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next