Advertisement

ಚಿಕ್ಕಮಗಳೂರು: ಗನ್ ಮ್ಯಾನ್ ನಿಯೋಜಿಸಲು ನಗರಸಭೆ ಅಧ್ಯಕ್ಷರಿಂದ ಎಸ್ ಪಿಗೆ ಪತ್ರ

11:41 AM May 25, 2022 | Team Udayavani |

ಚಿಕ್ಕಮಗಳೂರು: ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಪೊಲೀಸ್ ಗನ್ ಮ್ಯಾನ್ ನಿಯೋಜಿಸುವಂತೆ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವೇಣುಗೋಪಾಲ್‍ ಎಸ್ಪಿ ಅಕ್ಷಯ್‍ಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಕಿಡಿಗೇಡಿಗಳು ನನ್ನನ್ನು ಹಿಂಬಾಲಿಸಿರುವುದ ನನ್ನ ಗಮನಕ್ಕೆ ಬಂದಿದೆ. ಕುಟುಂಬದ ಜೊತೆ ಧರ್ಮಸ್ಥಳಕ್ಕೆ ಹೋಗುವ ವೇಳೆಯಲ್ಲೂ ನನ್ನ ಹಿಂದೆಯೇ ಬಂದು ನನ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ನಾನು ಚಿಕ್ಕಮಗಳೂರು ನಗರದ ಪ್ರಥಮ ಪ್ರಜೆಯಾಗಿದ್ದೇನೆ. ಹಾಗಾಗಿ ನನ್ನ ಸುರಕ್ಷತೆಯಿಂದ ಗನ್ ಮ್ಯಾನ್ ನಿಯೋಜಿಸಲು ಈ ಮೂಲಕ ಕೋರುತ್ತೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next