Advertisement

ಜಪ್ತಿ ಮಾಡಿದ ಟ್ರ್ಯಾಕ್ಟರ್‌ ಬಿಡಿಸಲು ಮನವಿ

08:19 PM Sep 08, 2022 | Team Udayavani |

ರಾಯಚೂರು: ಟ್ರ್ಯಾಕ್ಟರ್‌ ಖರೀದಿಸಲು ಫೈನಾನ್ಸ್‌ ಪಡೆದ ರೈತ ಸಕಾಲಕ್ಕೆ ಕಂತು ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಹಣಕಾಸು ಸಂಸ್ಥೆ ಟ್ರ್ಯಾಕ್ಟರ್‌ ಜಪ್ತಿ ಮಾಡಿದ್ದು, ಕೂಡಲೇ ಟ್ರ್ಯಾಕ್ಟರ್‌ ಬಿಡಿಸಿಕೊಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.

Advertisement

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸಾಕೀನಕಳ್ಳಿ ಲಿಂಗಸುಗೂರಿನ ನಿವಾಸಿಯಾದ ಅಯ್ನಾಳಪ್ಪ ಅವರು 18-06-2021ರಂದು ಖಾಸಗಿ ಹಣಕಾಸು ಸಂಸ್ಥೆಯಿಂದ 4.84 ಲಕ್ಷ ರೂ. ಸಾಲ ಪಡೆದು ಟ್ರ್ಯಾಕ್ಟರ್‌ ಖರೀದಿಸಿದ್ದ. ಆದರೆ, ಟ್ರ್ಯಾಕ್ಟರ್‌ ಸಾಲದ ಕಂತು ಪಾವತಿಸಲು ಆಗಿರಲಿಲ್ಲ. ಆದರೆ, ಜುಲೈ 22ರಂದು ರೈತ ಅಯ್ನಾಳಪ್ಪನ ಟ್ರ್ಯಾಕ್ಟರ್‌ ಜಪ್ತಿ ಮಾಡಿರುವ ಸಂಸ್ಥೆ, ಕಂತಿನ ಹಣ ಪಾವತಿಸಲು ಮುಂದಾದರೂ ರೈತನನ್ನು ಅಲೆಸುತ್ತಿದ್ದಾರೆ. ಬಾಕಿ ಕಂತುಗಳನ್ನು ಪಾವತಿಸಿಕೊಂಡು ಟ್ರ್ಯಾಕ್ಟರ್‌ ಬಿಡುಗಡೆ ಮಾಡಲು ಸೂಚಿಸಬೇಕು ಎಂದು ಮನವಿ ಮಾಡಿದರು.

ರೈತ ಅಯ್ನಾಳಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಸದಸ್ಯರಾದ ರಾಮಯ್ಯ ಜವಳಗೇರಾ, ನರಸಪ್ಪ ದೇವಸುಗೂರು, ಜಿ.ರಾಮಬಾಬು, ನರಸಪ್ಪ ನಾಯಕ, ಮಾನಯ್ಯ ಅಂಕುಶದೊಡ್ಡಿ, ರಾಜಾಸಾಬ್‌, ನಿರುಪಾದೆಪ್ಪ ಅಡ್ಡಿ ಸೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next