Advertisement

ಸಿದ್ದಾಪುರ ಅಂಚೆ ಕಚೇರಿಯಲ್ಲಿ ಆಧಾರ್‌ ತಿದ್ದುಪಡಿಗೆ ಮನವಿ

10:36 PM Oct 04, 2019 | Sriram |

ಸಿದ್ದಾಪುರ: ಸಿದ್ದಾಪುರ ಅಂಚೆ ಕಚೇರಿಯಲ್ಲಿ ಕಳೆದ 2 ವರ್ಷಗಳ ಹಿಂದೆ ಆಧಾರ್‌ ತಿದ್ದುಪಡಿಗೆ ಬೇಕಾಗುವ ಉಪ ಕರಣಗಳು ಬಂದಿದ್ದರೂ, ಇಂದಿನ ತನಕ ಅಂಚೆ ಇಲಾಖೆ ಆಧಾರ್‌ ತಿದ್ದುಪಡಿ ಕಾರ್ಯ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸಾರ್ವಜನಿಕರ ಆಧಾರ್‌ ತಿದ್ದುಪಡಿ ಮಾಡುವ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಅ. 3ರಂದು ಸಿದ್ದಾಪುರ ಜಯ ಕರ್ನಾಟಕ ಸಂಘಟನೆಯಿಂದ ಸಿದ್ದಾಪುರ ಅಂಚೆ ಕಚೇರಿಯ ಸಬ್‌ ಪೋಸ್ಟ್‌ಮಾಸ್ಟರ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಸಿದ್ದಾಪುರ ಅಂಚೆ ಕಚೇರಿಯ ಸಬ್‌ ಪೋಸ್ಟ್‌ಮಾಸ್ಟರ್‌ ಸಾವಿತ್ರಿ ಅವರು ಮನವಿ ಯನ್ನು ಸ್ವೀಕರಿಸಿ ಮಾತನಾಡಿ, ಹತ್ತು ದಿನಗಳಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಆಧಾರ್‌ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಯ ಕರ್ನಾಟಕ ಸಿದ್ದಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಕೊಠಾರಿ, ಗೌರವಾಧ್ಯಕ್ಷ ಸುದರ್ಶನ ಶೆಟ್ಟಿ ಬಾಳೆಬೇರು, ಕಾರ್ಯದರ್ಶಿ ಮಂಜುನಾಥ ಕುಲಾಲ ಜನ್ಸಾಲೆ, ಉಪಾಧ್ಯಕ್ಷ ಸಂಜೀವ ಗಾಂಧಿ ಐರಬೈಲು, ಸದಸ್ಯರಾದ ಗುರುರಾಜ, ವಸಂತ, ಗೋವಿಂದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next