Advertisement

ಬಿತ್ತನೆ ಬೀಜ ಪಡೆಯಲು ಎಪಿಎಂಸಿಯಲ್ಲಿ ನೂಕುನುಗ್ಗಲು

12:04 PM Jun 10, 2022 | Team Udayavani |

ಚಿಂಚೋಳಿ: ಪಟ್ಟಣದ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ನೀಡುತ್ತಿರುವ ಮುಂಗಾರು ಬಿತ್ತನೆ ಬೀಜಗಳನ್ನು ಪಡೆದುಕೊಳ್ಳುವುದಕ್ಕೆ ನೂಕುನುಗ್ಗಲು ಉಂಟಾಗುತ್ತಿರುವುದರಿಂದ ರೈತ ಮಹಿಳೆಯರು ತೊಂದರೆಪಡುವಂತೆ ಆಗಿದೆ.

Advertisement

ಕಳೆದ ಜೂನ್‌ 6ರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಮುಂಗಾರು ಬಿತ್ತನೆ ಬೀಜಗಳಾದ ಸೋಯಾಬಿನ್‌, ಹೆಸರು, ಉದ್ದು ನೀಡಲಾಗುತ್ತಿದೆ. ತಾಲೂಕಿನ ಕುಂಚಾವರಂ, ಸಂಗಾಪುರ,ಧರ್ಮಸಾಗರ, ಶಾದಿಪುರ, ಮಿರಿಯಾಣ, ಚಿಂಚೋಳಿ, ಐನೋಳಿ, ದೇಗಲಮಡಿ, ನಾಗಾಇದಲಾಯಿ, ಸಾಲೇಬೀರನಳ್ಳಿ ಇನ್ನಿತರ ಕಡೆಗಳಿಂದ ದಿನನಿತ್ಯ ಸಾವಿರಾರು ರೈತರು ಇಲ್ಲಿಗೆ ಬರುತ್ತಿದ್ದಾರೆ. ನೂಕು ನುಗ್ಗಲು ಉಂಟಾದರೂ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ರೈತರಿಗೆ ಬೀಜ ನಿಡುವಲ್ಲಿ ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ರೈತ ಮಹಿಳೆಯರು, ರೈತರು ಬಿಸಿಲಿನಲ್ಲಿ ನಿಲ್ಲಬೇಕಾಗಿದೆ. ಬೆಳಗಿನಿಂದಲೇ ವಿವಿಧ ಗ್ರಾಮ, ತಾಂಡಾಗಳಿಂದ ಬಂದ ರೈತರಿಗೆ ಕುಡಿಯುವ ನೀರು, ನೆರಳು ವ್ಯವಸ್ಥೆ ಮಾಡಿಲ್ಲವೆಂದು ರೈತರು ದೂರಿದ್ದಾರೆ.

ತಾಲೂಕಿನ ಕೋಡ್ಲಿ, ಸುಲೇಪೇಟ, ಚಿಮ್ಮನಚೂಡ, ಐನಾಪುರ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಪಡೆದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡದೇ ಇರುವುದರಿಂದ ನೂಕು ನುಗ್ಗಲು ಉಂಟಾಗಿ ರೈತರು ಪರದಾಡುವಂತೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next