Advertisement

ಬಂಗಾರ ಠೇವಣಿಗೆ ಗೃಹಸ್ಥರ ನಿರಾಸಕ್ತಿ, ದೇಗುಲಗಳಿಗೆ ಉತ್ಸಾಹ

09:41 PM Jun 29, 2023 | Team Udayavani |

ಅಹ್ಮದಾಬಾದ್‌: ಬಂಗಾರವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿಟ್ಟು ಲಾಭ ಪಡೆಯುವ ಕೇಂದ್ರದ ಜಿಎಂಎಸ್‌ ಯೋಜನೆಗೆ ಭಾರತೀಯ ಗೃಹಸ್ಥರು ಆಸಕ್ತಿ ತೋರಿಲ್ಲ ಎಂದು ಸಮೀಕ್ಷೆ ಹೇಳಿದೆ. ಆದರೆ ದೇವಸ್ಥಾನಗಳು ಮಾತ್ರ ಈ ವಿಚಾರದಲ್ಲಿ ಜಾಸ್ತಿ ಆಸ್ಥೆ ತೋರುತ್ತಿವೆ.

Advertisement

ಗುಜರಾತ್‌ನ ಅಂಬಾಜಿ ಮತ್ತು ಸೋಮನಾಥ ದೇಗುಲಗಳು ಒಟ್ಟಾಗಿ 200 ಕೆಜಿ ಬಂಗಾರವನ್ನು ಠೇವಣಿಯಾಗಿಟ್ಟಿವೆ. ಕೇಂದ್ರ ಸರ್ಕಾರವೂ ದೇಗುಲಗಳಿಗೆ ಬಂಗಾರವನ್ನು ಠೇವಣಿಯಾಗಿಡಲು ಪ್ರೋತ್ಸಾಹ ನೀಡುತ್ತಿದೆ ಎನ್ನುವುದನ್ನು ಗಮನಿಸಬೇಕು.

ಅಹ್ಮದಾಬಾದ್‌ನ ಐಐಎಂನಲ್ಲಿರುವ ಭಾರತೀಯ ಬಂಗಾರ ನೀತಿ ಕೇಂದ್ರದ ಸಮೀಕ್ಷೆ ಪ್ರಕಾರ, ಕೇವಲ ಶೇ.0.22ರಷ್ಟು ಬಂಗಾರವನ್ನು ಮಾತ್ರ ಗೃಹಸ್ಥರು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿಟ್ಟಿದ್ದಾರೆ. ಆದರೆ ದೇಗುಲಗಳಿಂದ ಹೆಚ್ಚೆಚ್ಚು ಚಿನ್ನ ಠೇವಣಿಯಾಗುತ್ತಿದೆ. ಬಾಣಸ್ಕಾಂತ ಜಿಲ್ಲೆಯ ಅಂಬಾಜಿ ದೇಗುಲದಿಂದ 168 ಕೆಜಿ ಚಿನ್ನ ಠೇವಣಿಯಾಗಿದೆ. ಉಳಿದ ಚಿನ್ನ ಸೋಮನಾಥದಿಂದ ಹೋಗಿದೆ. ಅವುಗಳ ಮೊತ್ತ 120 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ದೇಶದ ನಿವಾಸಿಗಳು ಠೇವಣಿ ಇರಿಸಿರುವ ಪ್ರಮಾಣ ಕೇವಲ ಶೇ.0.22 ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next