Advertisement

ಅಪನಗದೀಕರಣದಿಂದ ಆದ ಲಾಭವೇನು?: ನಿತೀಶ್‌

03:45 AM Feb 11, 2017 | Team Udayavani |

ನವದೆಹಲಿ: ಪ್ರಧಾನಿ ಮೋದಿ ಅವರ ನೋಟುಗಳ ಅಪನಗದೀಕರಣ ನೀತಿಯನ್ನು ಶ್ಲಾ ಸಿದ್ದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಇದೀಗ ಉಲ್ಟಾ ಹೊಡೆದಿದ್ದಾರೆ. ನೋಟು ಅಮಾನ್ಯವು ಒಂದು ಸ್ಮರಣೀಯ ನಿರ್ವಹಣಾ ವೈಫ‌ಲ್ಯ ಎನ್ನುವ ಮೂಲಕ ಅವರು, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ರ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

Advertisement

ದೆಹಲಿಯ ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್‌, “ಮಾಜಿ ಪ್ರಧಾನಿ ಸಿಂಗ್‌ ಹೇಳಿದ ಮಾತು ನಿಜ. ಆರಂಭದಲ್ಲಿ ನಾನು ಅಪನಗದೀಕರಣದಿಂದ ಕಪ್ಪುಹಣ ನಿರ್ಮೂಲನೆ ಆಗುತ್ತದೆಂದು ಭಾವಿಸಿ, ಅದನ್ನು ಬೆಂಬಲಿಸಿದ್ದೆ. ಆದರೆ, ಆಗಿದ್ದು ಏನೂ ಇಲ್ಲ. ನೋಟು ಅಮಾನ್ಯದಿಂದ ಆದ ಲಾಭವೇನು, ಎಷ್ಟು ಕಪ್ಪುಹಣ ವಾಪಸ್‌ ಬಂತು ಎಂಬುದನ್ನು ಕೇಂದ್ರ ಸರ್ಕಾರವೇ ಹೇಳಬೇಕು’ ಎಂದಿದ್ದಾರೆ. ಜತೆಗೆ, ವಿಶ್ವದ ಯಾವುದೇ ಮೂಲೆಯಲ್ಲೂ ನಗದುರಹಿತ ಅಥವಾ ಕಡಿಮೆ ನಗದಿನ ವಹಿವಾಟು ಯಶಸ್ವಿಯಾಗಿಲ್ಲ. ಹಾಗಿರುವಾಗ, ಭಾರತದಂಥ ದೇಶದಲ್ಲಿ ಅದು ಯಶಸ್ವಿಯಾಗಲು ಹೇಗೆ ಸಾಧ್ಯ ಎಂದೂ ಅವರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next