Advertisement

ಆ್ಯಂಥ್ರಾಕ್ಸ್‌ ಭೀತಿ ಬೇಡ: ತ್ರಿಶೂರ್‌ ಡಿಸಿ

04:15 PM Jul 01, 2022 | Team Udayavani |

ತ್ರಿಶೂರ್‌/ತಿರುವನಂತಪುರ: ವರ್ಷಗಳ ಹಿಂದೆ, ಭಾರತಕ್ಕೆ ಕಾಲಿಟ್ಟಿದ್ದ ಆ್ಯಂಥ್ರಾಕ್ಸ್‌ ಸೋಂಕು ಕೇರಳದಲ್ಲಿ ಪುನಃ ಪತ್ತೆಯಾಗಿದ್ದು, ತ್ರಿಶೂರ್‌ ಬಳಿಯ ಅರಣ್ಯ ಪ್ರದೇಶದಲ್ಲಿ ಎರಡು ಕಾಡು ಹಂದಿಗಳು ಈ ಕಾಯಿಲೆಗೆ ತುತ್ತಾಗಿ ಬಲಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.  ಆದರೆ, ಇದರಿಂದ ಸಾರ್ವಜನಿಕರು ಭಯಪಡಬೇಕಿಲ್ಲ ಎಂದು ತ್ರಿಶೂರ್‌ ಜಿಲ್ಲಾಧಿಕಾರಿ ಹರಿತಾ ವಿ. ಕುಮಾರ್‌ ತಿಳಿಸಿದ್ದಾರೆ.

Advertisement

ಕಾಡಿನಲ್ಲಿ ಕೆಲವು ಹಂದಿಗಳು ಆ್ಯಂಥ್ರಾಕ್ಸ್‌ ಗೆ ಬಲಿಯಾಗಿರುವುದು ನಿಜವಾದರೂ, ಆ ಕಾಯಿಲೆ ನಾಡಿನಲ್ಲಿರುವ ಹಸು, ಎಮ್ಮೆ ಅಥವಾ ಯಾವುದೇ ಸಾಕು ಪ್ರಾಣಿಗಳಲ್ಲಿ ಪತ್ತೆಯಾಗಿಲ್ಲ. ಆ್ಯಂಥ್ರಾಕ್ಸ್‌ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದು ನಿಜವಾದರೂ, ಸಾಕುಪ್ರಾಣಿಗಳಿಗೆ ಇದು ಹರಡಿಲ್ಲವಾದ್ದರಿಂದ ಯಾರೂ ಭಯಪಡಬೇಕಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next