ಮಂಗಳೂರು: ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಕಾಲೇಜುಗಳಿಂದ ಸಂಗ್ರಹಿಸುವ ಪದ್ಧತಿಯನ್ನು ಕೈಬಿಟ್ಟಿರುವ ಮಂಗಳೂರು ವಿಶ್ವವಿದಾನಿಲಯವು ಇನ್ನು ಮುಂದೆ ಸಂಬಂಧ ಪಟ್ಟ ಕಾಲೇಜಿನಿಂದ ಅಂಚೆ ಮೂಲಕ ಸಂಗ್ರಹಿಸುವ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಪರೀಕ್ಷೆ ನಡೆದ ದಿನವೇ ನೋಂದಾಯಿತ ಅಂಚೆ ಮೂಲಕ ಕುಲಸಚಿವರ (ಪರೀಕ್ಷಾಂಗ) ಕಚೇರಿಗೆ ಕಳುಹಿಸುವಂತೆ ವಿ.ವಿ.ಯಿಂದ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಸುತ್ತೋಲೆ ಕಳುಹಿಸಲಾಗಿದೆ.
ವಿ.ವಿ.ಯ ಈ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿ.ವಿ. ಸಿಂಡಿಕೇಟ್ನ ಪೂರ್ವ ಸದಸ್ಯ ಹರೀಶ್ ಆಚಾರ್ಯ ಅವರು, “ಇದು ವಿವೇಚನೆ ರಹಿತ ತೀರ್ಮಾನ. ಉತ್ತರ ಪತ್ರಿಕೆಯನ್ನು ಈ ರೀತಿ ಕಳುಹಿಸಿದಾಗ ಸಾಗಾಟದ ನಿರ್ವಹಣೆಯಲ್ಲಿ ಲೋಪವಾಗಿ ಹಾನಿಯಾದರೆ ಯಾರು ಹೊಣೆ’ ಎಂದು ಅವರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.