Advertisement

ದ್ರೋಣನ ಸಾವಿನ ಬೆನ್ನಲ್ಲೆ ಇನ್ನೊಂದು ಕಾಡಾನೆ ಸಾವು

09:07 AM Apr 29, 2019 | Vishnu Das |

ವನ್ಯ ಜೀವಿ ಪ್ರೇಮಿಗಳ ತೀವ್ರ ಕಳವಳ

Advertisement

ಮೈಸೂರು : ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆಯ ಆಕರ್ಷಣೆಯಾಗಿದ್ದ 37 ವರ್ಷ ಪ್ರಾಯದ ದ್ರೋಣ ಸಾವನ್ನಪ್ಪಿದ ಬೆನ್ನಲ್ಲೇ ಇನ್ನೊಂದು ಆನೆ ಸಾವನ್ನಪ್ಪಿದೆ.

ಪಿರಿಯಾರಪಟ್ಟಣದ ಆನೆ ಚೌಕೂರು ಅರಣ್ಯ ವ್ಯಾಪ್ತಿಯಲ್ಲಿ 45 ವರ್ಷ ಪ್ರಾಯದ ಹೆಣ್ಣಾನೆ ಸಾವನ್ನಪ್ಪಿದೆ.

ನಿತ್ರಾಣಗೊಂಡ ಸ್ಥಿತಿಯಲ್ಲಿ ಅರಣ್ಯ ಸಿಬಂದಿಗೆ ಕಾಡಾನೆ ಪತ್ತೆಯಾಗಿತ್ತು. ಚಿಕಿತ್ಸೆ ನೀಡಿದರೂ ಫ‌ಲಕಾರಿಯಾಗದೆ ಸಾವನ್ನಪ್ಪಿದೆ.

ದ್ರೋಣ ಕುಸಿದು ಸಾವನ್ನಪ್ಪುವ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಆಕ್ರೋಶವೂ ವ್ಯಕ್ತವಾಗಿತ್ತು.

Advertisement

ವನ್ಯ ಜೀವಿ ಪ್ರೇಮಿಗಳು ಆನೆಗಳ ಸಾವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next