Advertisement

ನವಜೀವನಕ್ಕೆ  ಕಾಲಿಟ್ಟ ರಂಜಿತಾ-ರಂಜಿತ್‌

01:04 PM Sep 13, 2018 | Team Udayavani |

ಮಡಿಕೇರಿ: ಮಹಾಮಳೆಯಿಂದ ಹಾನಿಗೀಡಾದ ಮಕ್ಕಂದೂರು ಗ್ರಾಮದ ರಂಜಿತಾ ಹಾಗೂ ಕೇರಳದ ಕಣ್ಣೂರಿನ ರಂಜಿತ್‌ ವಿವಾಹ ಸಮಾರಂಭ ವಿವಿಧ ಸಂಘ – ಸಂಸ್ಥೆಗಳ ಸಹಕಾರದೊಂದಿಗೆ ನಡೆಯಿತು. ಪ್ರಕೃತಿ ವಿಕೋಪಕ್ಕೆ ಗ್ರಾಮ ಬಲಿಯಾದ ಕಾರಣ ನಿಗದಿಯಾಗಿದ್ದ ಮದುವೆ ನಡೆಯುತ್ತದೆಯೋ ಇಲ್ಲವೋ ಎನ್ನುವ ಆತಂಕ ಕುಟುಂಬದವರಿಗೆ ಮೂಡಿತ್ತು.

Advertisement

ರಂಜಿತಾ ಕುಟುಂಬ ಭೂ ಕುಸಿತದಿಂದ ಮನೆ ಕಳೆದುಕೊಂಡಿತ್ತು. ಅನಂತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ಆದರೆ ನೊಂದ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದುಬರುವುದರೊಂದಿಗೆ ರಂಜಿತಾಳ ವಿವಾಹ ಭಾಗ್ಯ ಗಟ್ಟಿಯಾಯಿತು. ಬುಧವಾರ ಸೇವಾ ಭಾರತಿ ಹಾಗೂ ಲಯನ್ಸ್‌ ಕ್ಲಬ್‌ ನೇತೃತ್ವದಲ್ಲಿ ವಿವಾಹ ಸಮಾರಂಭ ನಡೆಯಿತು. ಬೆಳಗ್ಗೆ 10:30 ಗಂಟೆಗೆ ನಗರದ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ರಂಜಿತಾ ಹಾಗೂ ರಂಜಿತ್‌ ಹೊಸ ಜೀವನಕ್ಕೆ ಕಾಲಿಟ್ಟರು. ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next