Advertisement
ಕಳೆದ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಜನರು ಸೂರ್ಯನನ್ನೇ ಕಾಣದಂತಾಗಿದೆ. ಯಾವಾಗ ಬಿಸಿಲು ನೋಡುತ್ತೇವೆಯೋ ಎಂದು ಕಾತರಿಸುತ್ತಿದ್ದಾರೆ. ತಾಲೂಕಿನಲ್ಲಿ ಸಂಪೂರ್ಣ ಕತ್ತಲೆಯ ವಾತಾವರಣ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಜನವರಿ 1ರಿಂದ ಇಲ್ಲಿಯವರೆಗೆ ವಾಡಿಕೆಯಂತೆ 1074 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 2365 ಮಿ.ಮೀ. ಮಳೆಯಾಗಿದ್ದು, ಶೇ.120ಕ್ಕೂ ಹೆಚ್ಚು ಅಧಿಕ ಮಳೆ ಬಿದ್ದಿದೆ. ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ ತಾಲೂಕಿನಲ್ಲೇ ಅತಿ ಹೆಚ್ಚು ಮಳೆ ಬಿದ್ದಿರುವ ಹೋಬಳಿಯಲ್ಲಿ ಹೆತ್ತೂರು ಮೊದಲ ಸ್ಥಾನದಲ್ಲಿದೆ. ಬೆಳಗೋಡ ಕೊನೆಯ ಸ್ಥಾನದಲ್ಲಿದೆ.
Related Articles
ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಯಿಂದಾಗಿ ಮರಗಳು ನಿರಂತರವಾಗಿ ಧರೆಗುರುಳುತ್ತಿವೆ. ಬಹುತೇಕ ಹಳ್ಳ, ಕೆರೆಗಳು,
ಭರ್ತಿಯಾಗಿದ್ದು, ಅಂತರ್ಜಲ ಎಲ್ಲಂದರಲ್ಲಿ ಉಕ್ಕುತ್ತಿದೆ.
Advertisement
ತಾಲೂಕಿನಲ್ಲಿ ವಾರ್ಷಿಕವಾಗಿ ಬೀಳಬೇಕಿದ್ದ ಮಳೆ 5 ತಿಂಗಳಿಗೂ ಮೊದಲೇ ಸುರಿದಿದೆ. ಮಳೆಯಿಂದಾಗಿ ಹಲವೆಡೆಹಾನಿಯುಂಟಾಗಿದೆ. ಭತ್ತದ ಗದ್ದೆ, ಕಾಫೀ, ಮೆಣಸು ಮುಂತಾದ ಬೆಳೆ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಪರದಾಡಬೇಕಾಗುತ್ತದೆ.
ಸುಬ್ರಹ್ಮಣ್ಯ, ಸಹಾಯಕ ಕೃಷಿ ನಿರ್ದೇಶಕ ಒಸ್ಸೂರು ಎಸ್ಟೇಟ್ನಲ್ಲಿ ದಾಖಲಾದ ಮಾಹಿತಿ ಪ್ರಕಾರ ಹಲವು ವರ್ಷಗಳ ಬಳಿಕ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯ ಪ್ರಮಾಣ ದಾಖಲಾಗಿದೆ. ನಿರಂತರ ವರ್ಷಧಾರೆಯಿಂದಾಗಿ ರಸ್ತೆ, ಚರಂಡಿ, ಮನೆ, ಮರಗಳು ಧರಾಶಾಹಿಯಾಗಿವೆ. ಬೆಳೆ ನಷ್ಟದಿಂದ ಇಲ್ಲಿನ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾಲೂಕಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.
ಬಿ.ಎ.ಜಗನ್ನಾಥ್, ಜೆಡಿಎಸ್ ರಾಜ್ಯ ಉಪಾಧ್ಯಕ