Advertisement

ಜೀವ ಭಯದಲ್ಲಿರುವ ದಲಿತ ಕುಟುಂಬಗಳಿಗೆ ಆರ್ಥಿಕ ಪರಿಹಾರ ಘೋಷಿಸಿ

02:48 PM May 28, 2022 | Team Udayavani |

ಕಾರಟಗಿ: ತಾಲೂಕಿನ ನಂದಿಹಳ್ಳಿ ಗ್ರಾಮದ ದಲಿತರ ಮೇಲೆ ಇತ್ತಿಚೆಗೆ ನಡೆದಿರುವ ಹಲ್ಲೆ ಹಿನ್ನೆಲೆಯಲ್ಲಿ ಜೀವ ಭಯದಲ್ಲಿರುವ ದಲಿತ ಕುಟುಂಬಗಳಿಗೆ ಆರ್ಥಿಕ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಹಕ್ಕುಗಳ ಸಮಿತಿ ತಾಲೂಕು ಘಟಕದಿಂದ ತಹಶೀಲ್ದಾರ್‌ರ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

Advertisement

ಮಂಗಳವಾರ ತಹಶೀಲ್ದಾರ್‌ ಕಚೇರಿಗೆ ದಲಿತ ಹಕ್ಕುಗಳ ಸಮಿತಿ ಪದಾ ಕಾರಿಗಳು ಘೋಷಣೆಗಳನ್ನು ಕೂಗುತ್ತಾ ಆಗಮಿಸಿ ದಲಿತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಬಸವರಾಜ ಎಂ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್‌, ಸಹ ಸಂಚಾಲಕ ಹುಸೇನಪ್ಪ, ರಮೇಶ್‌ ಬಿ, ಮಂಜುನಾಥ್‌ ಡಗ್ಗಿ, ಹನುಮಂತ ಮುಕ್ಕುಂಪಿ, ಕೃಷ್ಣಪ್ಪ ನಾಯಕ್‌, ನಬಿಸಾಬ, ಕನಕರಾಯ, ಭೀಮೇಶ್‌ ಬೂದಗುಂಪಾ, ತಿಮ್ಮಣ್ಣ, ಶಿವಕುಮಾರ, ಮುದಿಯಪ್ಪ, ಚೆನ್ನಪ್ಪ, ದುರಗಮ್ಮ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next