Advertisement

ನೃತ್ಯ ಮಾಡಿ ಕೋವಿಡ್ ಸೋಂಕಿತರಿಗೆ ರಂಜನೆ ನೀಡಿದ ಜೆಡಿಎಸ್ ಶಾಸಕ ಅನ್ನದಾನಿ

10:25 AM May 15, 2021 | Team Udayavani |

ಮಂಡ್ಯ: ಕೋವಿಡ್ ಸೋಂಕಿತರ ಮನೋಲ್ಲಾಸಕ್ಕಾಗಿ ಶಾಸಕ ಕೆ.ಅನ್ನದಾನಿ ಹಾಡಿ, ನೃತ್ಯ ಮಾಡಿ ರಂಜಿಸಿದ್ದಾರೆ.

Advertisement

ಮಳವಳ್ಳಿ ಪಟ್ಡಣದ ಕೆಎಸ್ ಆರ್ ಟಿಸಿ ತರಬೇತಿ‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರು ರಂಜಿಸಲು ಜೆಡಿಎಸ್ ಶಾಸಕ ಅನ್ನದಾನಿ ನೃತ್ಯ ಮಾಡಿದರು.

ಸೋಂಕಿತರಿಗೆ ಮನೋರಂಜನೆ ನೀಡುವುದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಜಾನಪದ ಗೀತೆ ಹಾಡಿ ನೃತ್ಯಮಾಡಿ ರಂಜಿಸಿದ ಶಾಸಕರ ಜೊತೆ, ಸೋಂಕಿತರು ಕೂಡ ನೃತ್ಯ ಮಾಡಿ ಸಂತೋಷಪಟ್ಟಿದ್ದಾರೆ. ಸ್ವತಃ ಜಾನಪದ ಗಾಯಕರು ಹಾಗೂ ಕಲಾವಿದರಾಗಿರುವ ಶಾಸಕ ಅನ್ನದಾನಿ, ಸೋಂಕಿತರು ಬೇಗ ಗುಣಮುಖರಾಗುವಂತೆ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next