Advertisement

Ankola: ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ರೈತ ಸಾವು

03:15 PM Aug 04, 2024 | Team Udayavani |

ಅಂಕೋಲಾ: ರೈತನೋರ್ವ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ಗಾಯಗೊಂಡು ಸಾವನ್ನಪ್ಪಿದ ಘಟನೆ ತಾಲೂಕಿನ ಮೊರಳ್ಳಿ ಮಾಣಿಗುಡ್ಡ ಬಳಿ ಆ.4ರ ಭಾನುವಾರ ನಡೆದಿದೆ.

Advertisement

ಮೊಗಟಾ ಗ್ರಾ.ಪಂ. ವ್ಯಾಪ್ತಿಯ ಮೊರಳ್ಳಿ ಮಾಣಿಗುಡ್ಡ ನಿವಾಸಿ ನಾಗರಾಜ ತಿಮ್ಮಪ್ಪ ಗೌಡ(37) ಮೃತ ದುರ್ದೈವಿ.

ರೈತ ನಾಗರಾಜ ಆ.4ರ ಭಾನುವಾರ ಬೆಳಿಗ್ಗೆ ಮೊರಳ್ಳಿಯಲ್ಲಿರುವ ಸುರೇಶ ನಾಯಕ ಎಂಬವವರ ಗದ್ದೆಯಲ್ಲಿ ಉಳುಮೆ ಮಾಡಲು ತೆರಳಿದ್ದ. ಈ ವೇಳೆ ವಿಪರೀತ ಮಳೆ ಬರುತ್ತಿದ್ದ ಹಿನ್ನಲೆ ವಾಪಸ್ಸಾಗಿದ್ದು, ಮಧ್ಯಾಹ್ನ ಮಳೆ ಕಡಿಮೆಯಾದ ಬಳಿಕ ಮತ್ತೆ ಗದ್ದೆಗೆ ತೆರಳಿದ್ದು, ಪವರ್ ಟಿಲ್ಲರ್ ಮೂಲಕ ಉಳುಮೆ ಮಾಡುತ್ತಿದ್ದ ವೇಳೆ ಆತನ ಕಾಲು ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗಳಾಗಿತ್ತು. ಈ ಸಮಯ ತೀವ್ರ ರಕ್ತಸ್ರಾವ ಉಂಟಾಗಿದ್ದು ಗದ್ದೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಸ್ಥಳಕ್ಕೆ ಅಂಕೋಲಾ ಠಾಣೆಯ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next