Advertisement

ಅಂಕೋಲಾ : ಕಾರು ಬಡಿದು ಪಾದಚಾರಿ ಯುವತಿ ಸ್ಥಳದಲ್ಲೆ ಸಾವು

10:07 PM Jan 07, 2023 | Team Udayavani |

ಅಂಕೋಲಾ : ಪಾದಾಚಾರಿ ಯುವತಿಗೆ ಕಾರು ಬಡಿದು ಯುವತಿ ಮೃತಪಟ್ಟು ಕಾರಿನಲ್ಲಿದ್ದ ದಂಪತಿಗಳಿಗೆ ಗಾಯಗಳಾದ ಘಟನೆ ರಾ.ಹೆ. 66 ರ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಸಾವಂತ್ರಿ ಸಂಜೀವಪ್ಪ ಗುಜನುರು ಎಂಬ ಯುವತಿ ಮೃತ ಪಟ್ಟ ದುರ್ದೈವಿಯಾಗಿದ್ದಾಳೆ.

Advertisement

ಇವಳು ಹೆದ್ದಾರಿ ಪಕ್ಕದಿಂದ ನಡೆದುಕೊಂಡು ಬರುತ್ತಿದ್ದಾಗ ಕಾರವಾರ ಕಡೆಯಿಂದ ಅಂಕೋಲಾ ಕಡೆ ಬರುತ್ತದ್ದ ಕಾರು ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಹೆದ್ದಾರಿ ಪಕ್ಕ ನಡೆದುಕೊಂಡು ಹೊಗುವ ಯುವತಿಗೆ ಬಡಿದು ಬಳಿಕ ಅಣತಿ ದೂರದಲ್ಲಿ ನಿಲ್ಲಿಸಿಟ್ಟ ಟ್ಯಾಂಕರಗೆ ಹಿಂಬದಿಯಲ್ಲಿ ಬಡಿದುಕೊಂಡಿದ್ದಾನೆ.

ಅಪಘಾತದ ರಬ್ಬಸಕ್ಕೆ ಕಾರನ ಮುಂಭಾಗ ನುಚ್ಚುಗುಜ್ಜಾಗಿದ್ದು ಕೇರಳ ಮೂಲದ ಗೋವಾಕ್ಕೆ ಹೊರಟಿದ್ದ ದಂಪತಿಗಳಿಬ್ಬರು ಪ್ರೀತಾ ಮತ್ತು ವಿಜಯನ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದ ಸ್ಥಳದಿಂದ ಗಾಯಾಳುಗಳನ್ನು ತಾಲೂಕ್ ಆಸ್ಪತ್ರೆಗೆ ಸಾಗಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next