Advertisement

ಅಂಜುಶ್ರೀ ಸಾವು: ಆತ್ಮಹತ್ಯೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಕೆ

01:36 AM Jan 11, 2023 | Team Udayavani |

ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಪೆರುಂಬಳ ಬೇನೂರು ನಿವಾಸಿ ಅಂಜುಶ್ರೀ ಪಾರ್ವತಿ (19) ಸಾವಿಗೆ ಸಂಬಂಧಿಸಿ ಆಕೆ ಬರೆದಿದ್ದಲೆನ್ನಲಾದ ಮರಣ ಪತ್ರ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಮೇಲ್ಪರಂಬ ಪೊಲೀಸರು ಕಾಸರಗೋಡು ಸಬ್‌ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

Advertisement

ಮಾನಸಿಕ ತಳಮಳದಿಂದ ಜೀವನ ಕೊನೆಗೊಳಿಸುತ್ತಿದ್ದೇನೆ ಎಂಬ ಒಂದೇ ಸಾಲಿನ ಬರಹ ಬರೆಯಲಾಗಿತ್ತು ಎನ್ನ ಲಾ ಗಿದೆ. ರಾಸಾಯನಿಕ ಪರೀಕ್ಷೆಗಾಗಿ ಕಲ್ಲಿ ಕೋಟೆಯ ಲ್ಯಾಬ್‌ಗ ಕಳುಹಿಸಿರುವ ಆಕೆಯ ಸ್ಯಾಂಪಲ್‌ಗ‌ಳ ಪರೀಕ್ಷಾ ವರದಿಯ ಬಳಿಕವೇ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಜುಶ್ರೀ ಸಾವಿನ ಕುರಿತು ಸೈಬರ್‌ ಸೆಲ್‌ ಕೂಡ ತನಿಖೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next