Advertisement

ಪಾವಗಡ : ತಡರಾತ್ರಿ ದೇವಸ್ಥಾನದೊಳಗೆ ನಿಧಿ ತೆಗೆಯಲು ಬಂದವರನ್ನು ಹಿಡಿದ ಗ್ರಾಮಸ್ಥರು

08:13 PM Jul 25, 2022 | Team Udayavani |

ಪಾವಗಡ : ನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಿಧಿ ತೆಗೆಯಲು ಬಂದಿದ್ದ ಏಳು ಮಂದಿಯಲ್ಲಿ ಐವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಕಸಬಾ ಹೋಬಳಿಯ ವೆಂಕಟಾಪುರ ಗ್ರಾಮದ ಚೋಲ್ಲಾಪುರದಲ್ಲಿ ಭಾನುವಾರ ತಡ ರಾತ್ರಿ 12 ಗಂಟೆಯ ಸುಮಾರಿಗೆ ನಡೆದಿದೆ.

Advertisement

ಬಂಧಿತ ಆರೋಪಿಗಳನ್ನು ನೆರೆಯ ಆಂದ್ರಪ್ರದೇಶದ ಒಂಟಿರೆಡ್ಡಿಪಲ್ಲಿ ಗ್ರಾಮದ ವೆಂಕಟರಮಣಪ್ಪ, ಸಾಯಿಮುರಳಿ, ಮುರಳಿ, ನಾಗರಾಜು, ಚೆನ್ನರೆಡ್ಡಿ ಎನ್ನಲಾಗಿದೆ.

ಬಂಧಿತರಿಂದ ಮೆಟಲ್ ಡಿಟೆಕ್ಟರ್, ಸಲಿಕೆ, ಗಡಾರಿ ಇತರೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾವಗಡಪಟ್ಟಣ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಭಟ್ಕಳ: ಎಸ್ ಪಿ ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next