Advertisement

ಅಂಜನಾದ್ರಿಯಲ್ಲಿ ಇತಿಹಾಸ ತಿರುಚಿದ ನಾಮಫಲಕ ಸರಿಪಡಿಸದ ಹಂಪಿ ಅಭಿವೃದ್ಧಿ ಪ್ರಾಧಿಕಾರ !

02:20 PM Oct 12, 2021 | Team Udayavani |

ಗಂಗಾವತಿ :ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಸ್ಥಳ ಮಹಿಮೆ ಮತ್ತು ಆಂಜನೇಯನ ಜನ್ಮ ಸ್ಥಳದ ಕುರಿತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ .

Advertisement

ತಿರುಪತಿ ತಿರುಮಲ ದೇವಸ್ಥಾನ ಸಮಿತಿಯವರು ಅಂಜನಾದ್ರಿಯ ಜನ್ಮಸ್ಥಳ  ತಿರುಮಲ ಎಂದು ಪ್ರಸ್ತಾಪಿಸುವ ಸಂದರ್ಭದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದ ಮಧ್ಯೆ ಕಿಷ್ಕಿಂದಾ ಅಂಜನಾದ್ರಿ ಯಲ್ಲಿ ಅಳವಡಿಸಿರುವ ಮಾಹಿತಿ ನಾಮಫಲಕಗಳು ತಪ್ಪಿನಿಂದ ಕೂಡಿವೆ .

ಅಂಜನಾದ್ರಿ ಹನುಮಂತನ ಜನ್ಮಸ್ಥಳ ಎಂದು ಸಮರ್ಥಿಸುವ ದಾಖಲೆಗಳಿದ್ದರೂ ಹವಾಮಾ ತಪ್ಪು ಮಾಹಿತಿ ನೀಡುವ ಮೂಲಕ ಅಂಜನಾದ್ರಿ ಬಗ್ಗೆ ಗೊಂದಲದ ಮಾಹಿತಿಯನ್ನು ನಾಮಫಲಕಗಳಲ್ಲಿ ಅಳವಡಿಸಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ .

ಈ ನಾಮಫಲಕದಲ್ಲಿ ಆಂಜನೇಯನ ಜನ್ಮಸ್ಥಳ ಮತ್ತು ಕಿಷ್ಕಿಂದಾ ಹಾಗೂ ಬಾಲ ಆಂಜನೇಯ ಲೀಲೆಯ ಸ್ಥಳಗಳು ಎಂಬ ಇತ್ಯಾದಿ ವಿವರಗಳನ್ನು ಪ್ರಸ್ತುತಪಡಿಸಲಾಗಿದೆ .ಆಂಜನೇಯ ಮತ್ತು ಶ್ರೀರಾಮ ಲಕ್ಷ್ಮಣರ ಸಂದರ್ಶನ ಮಾತಂಗ ಪರ್ವತದಲ್ಲಿ ಆಗಿದೆಯೆಂದು .ಕಿಷ್ಕಿಂದಾ ಅಂಜನಾದ್ರಿಯನ್ನು ಬಾಲಾಂಜನೇಯ ನ ಆಟವಾಡಿದ ಸ್ಥಳವೆಂದು ನಮೂದು ಮಾಡಲಾಗಿದೆ .

ಇತಿಹಾಸ ತಜ್ಞರ ಪ್ರಕಾರ ಆಂಜನೇಯ ಶ್ರೀರಾಮ ಲಕ್ಷ್ಮಣರ ಸಂದರ್ಶನ ಋಷ್ಯಮೂಖ ಪರ್ವತದ ಬಳಿ ಆಗಿದೆ. ಅಂಜನಾದ್ರಿ ಪರ್ವತವು ಆಂಜನೇಯನ ಜನ್ಮಸ್ಥಳ ಎಂದು ಉಲ್ಲೇಖಿಸಲಾಗಿದೆ .ಕುವೆಂಪು ಬರೆದ ವಾಲ್ಮೀಕಿ ರಾಮಾಯಣ ಸೇರಿದಂತೆ ವಿವಿಧ ಗ್ರಂಥಗಳಲ್ಲಿ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ವಾನರ ಸಾಮ್ರಾಜ್ಯ ಕಿಷ್ಕಿಂದ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಲೆಯಲ್ಲಿ ವಾನರರು ಖ್ಯಾತರಾಗಿದ್ದರೂ ಆದ್ದರಿಂದಲೇ ಶ್ರೀರಾಮಚಂದ್ರನಿಗೆ ಶ್ರೀರಾಮ ಸೇತುವೆ ಕಟ್ಟುವಲ್ಲಿ ವಾನರರು ಸಹಕರಿಸಿದ್ದರು .ಇಂತಹ ಇತಿಹಾಸವನ್ನು ಹೊಂದಿರುವ   ಪ್ರದೇಶ ಮತ್ತು ಅಂಜನಾದ್ರಿ ಬೆಟ್ಟದ ಬಗ್ಗೆ ಹವಾಮಾ ಹಾಕಿರುವ ನಾಮಫಲಕಗಳಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದೆ .

Advertisement

ಇದನ್ನೂ ಓದಿ:ಸಿಎಂ ಬೊಮ್ಮಾಯಿಗೆ ನಾಯಕತ್ವ ಸತ್ವಪರೀಕ್ಷೆ   

ಈಗಾಗಲೇ ಉದಯವಾಣಿ ವೆಬ್ ನ್ಯೂಸ್ ಮತ್ತು  ಉದಯವಾಣಿ ಪತ್ರಿಕೆಯಲ್ಲಿ ಇತಿಹಾಸ ತಿರುಚಿ ಅಂಜನಾದ್ರಿ ಬಳಿ ನಾಮಫಲಕ ಹಾಕಲಾಗಿದೆ ಎಂದು ವಿವರವಾಗಿ ವರದಿ ಪ್ರಕಟಗೊಂಡಿತ್ತು . ಆದರೂ ಎಚ್ಚೆತ್ತುಕೊಳ್ಳದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಾಮಫಲಕ ಬರೆಯುವ ಏಜೆನ್ಸಿಯವರಿಗೆ ನೋಟಿಸ್ ನೀಡಿ ಕೈತೊಳೆದುಕೊಂಡಿದ್ದಾರೆ .ನಾಮಫಲಕಗಳ ಬದಲಾವಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹವಾಮಾನ ಅಧಿಕಾರಿಗಳು ಆನೆಗೊಂದಿ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಜನರ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ .

ಹೋರಾಟದ ಎಚ್ಚರಿಕೆ :ನಗರದ ಆನೆಗೊಂದಿ ಭಾಗದಲ್ಲಿ ಕಿಷ್ಕಿಂದಾ ಪಂಪಾಸರೋವರ ಋಷ್ಯ ಮುಖ ಪರ್ವತ ಸೇರಿದಂತೆ ಐತಿಹಾಸಿಕ ಸ್ಮಾರಕಗಳು ಇದ್ದರೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದ ಫಲವಾಗಿ ಇತಿಹಾಸವನ್ನ ತಿರುಚಿದ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಲಾಗಿದೆ .ಇದನ್ನು ತೆರವುಗೊಳಿಸಿ  ಸ್ಥಳೀಯ ಇತಿಹಾಸಕಾರರು ಮತ್ತು  ವಿದ್ವಾಂಸರ ಬಳಿ ಚರ್ಚಿಸಿ ನಾಮಫಲಕದ  ಮಾಹಿತಿ ಬರೆಸುವಂತೆ ಉದಯವಾಣಿ  ವೆಬ್ ನ್ಯೂಸ್ ಉದಯವಾಣಿ  ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿದ್ದರೂ ಎಚ್ಚೆತ್ತುಕೊಳ್ಳದ ಹವಾಮಾ ಅಧಿಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಕೈತೊಳೆದುಕೊಂಡಿದ್ದಾರೆ .

ಕೂಡಲೇ ನಾಮಫಲಕಗಳನ್ನು  ಬದಲಾವಣೆ ಮಾಡದಿದ್ದರೆ ಈ ಅವಮಾನದ ವಿರುದ್ಧ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಸ್ಥಳೀಯ ಅಭಿವೃದ್ಧಿ ಹೋರಾಟ ಮತ್ತು ದಲಿತ ಸಂಘಟನೆಗಳ ಮುಖಂಡರಾದ ನಾಗೇಶ್ ಕೋಡಿ  ಹವಾಮಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ .

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next