Advertisement
ಧಾರವಾಡ ತಾಲೂಕಿನ ನಿಗಧಿ(ಭೇನಕನಕಟ್ಟಿ)ಗ್ರಾಮದ ಶಿವಶಂಕ್ರಯ್ನಾ ಚಂ ಯರಗಂಬಳಿಮಠ ಮತ್ತು ಮಂಜಯ್ನಾ ಚಂ ಯರಗಂಬಳಿಮಠ ಸಹೋದರರು. ಇಂದು ಇವರು ಮಾಡಿದ ಸಾಧನೆ ಹೈನುಗಾರಿಕೆಯ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಸಹೋದರರು ವಿಧ್ಯೆಯಲ್ಲಿ ನೆಲೆ ಕಾಣದೆ ತಂದೆಯ ಮಾರ್ಗದರ್ಶನದಲ್ಲಿ ಕೃಷಿಗೆ ತೊಡಗಿಕೊಂಡವರು. ತಮ್ಮ ಅಲ್ಪ ಜಮೀನಿನಲ್ಲಿ ಅದು ಈ ಬರಗಾಲದ ಸಮಯದಲ್ಲಿ ಕೇವಲ ಕೃಷಿಯಲ್ಲಿ ಜೀವನ ಕಷ್ಟಸಾಧ್ಯ ಎಂದು ಕೃಷಿಯ ಜೊತೆಗೆ ಹೈನುಗಾರಿಕೆ ಆರಂಭಿಸಿದರು. ಮೊದಲು ಒಂದು ಜವಾರಿ ಹಸುನಿಂದ ಶುರುಮಾಡಿದ್ದು. ಮೊದಲಿಗೆ ಇವರು ಶಿರಸಿ ಮೂಲದ ಒಂದು ಧೇವಣಿ ತಳಿಯ ಹಸು ಅದು. ಇವತ್ತು ಇವರ ಡೈರಿಯಲ್ಲಿ ಪ್ಯೂರ್ ಹೆಚ್ಎಫ್, ಧೇವಣೀ, ರೇಡ್ ಎನ್ ತಳಿಯ ಹಸುಗಳು ಮತ್ತು ಶೃತಿ, ಗುಜರಾತಿ ತಳಿಯ ಎಮ್ಮೆಗಳನ್ನು ಸಾಕಿದ್ದಾರೆ. ಹೆಚ್ಚಾ ಕಡಿಮೆ ಇವರ ಹತ್ತಿರ 15 ನಾನಾ ತಳಿಯ ಹಸುಗಳಿವೆ.
ಇವರು ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳನ್ನು ಬಳಸದೆ ಕೇವಲ ತಮ್ಮ ಅಲ್ಪ ಜಮೀನಿನಲ್ಲಿ ಬೆಳೆದ ನೇಪಿಯರ್, ಗಿನ್ನಿ ಗ್ರಾಸ್, ಫಾರ್ಮ್ ಕಡ್ಡಿಯ ಹುಲ್ಲು ಮತ್ತು ಬಾರ್ಲಿ, ಹುರುಳಿ ನೂಚ್ಚು, ಸೋಯಾಬಿನ್, ಹತ್ತಿಕಾಳು ಶೆಂಗಾ, ಭತ್ತದ ತೌಡು, ಗೋದಿ ಹಿಟ್ಟುಗಳನ್ನು ಬಳಸಿ ಅಧಿಕ ಹಾಲು ಉತ್ಪಾದನೆ ಮಾಡುತ್ತಾರೆ.
Related Articles
Advertisement
ಎರೆ ಹುಳು ಗೊಬ್ಬರ ತಯಾರಿಕೆದನಗಳ ಸಗಣಿ ಮತ್ತು ಮೂತ್ರ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದರಿಂದ ಒಂದು ಸಣ್ಣ ಟ್ಯಾಂಕ್ ಆಕಾರದ ತೊಟ್ಟಿಯನ್ನು ನಿರ್ಮಾಣ ಮಾಡಿ ಅದರಲ್ಲಿ ಎಲ್ಲಾ ತ್ಯಾಜ್ಯವನ್ನು ಒಂದೆಡೆ ಸೆರಿಸುತ್ತಾರೆ. ಆಮೇಲೆ ಆ ತೋಟ್ಟಿಯಲ್ಲಿ ಎರೆಹುಳುಗಳನ್ನು ಬಿಡುವುದರಿಂದ ಗುಣಮಟ್ಟದ ಎರೆಹುಳು ಗೊಬ್ಬರ ತಯಾರಾಗುತ್ತದೆ. ಈ ಗೊಬ್ಬರವನ್ನು ಬಳಸಿ ಒಳ್ಳೆಯ ಹುಲ್ಲಿನ ಬೆಳೆ ತೆಗೆಯುವುದರಿಂದ ಹಸುವಿನ ಹಾಲು ಕೂಡ ಗುಣಮಟ್ಟದಿಂದ ಕೂಡಿದೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ಈ ಹೈನುಗಾರಿಕೆ ಆರಂಭಿಸಿದೆವು ಆದರೆ ನಾವು ಇವತ್ತು ಬೇರೆಯವರಿಗೆ ಕೇಲಸ ನಿಡುವ ರಿತಿಯಲ್ಲಿ ಬೇಳೆಯುತ್ತೆವೆ ಎಂದು ಕೊಂಡಿರಲಿಲ್ಲಾ ಆ ಗೋಮಾತೆಯ ಆಶಿರ್ವಾದ ನಮ್ಮ ಮೇಲಿರುವದರಿಂದ ನಾವು ಇವತ್ತು ನೆಮ್ಮದಿಯ ಜಿವನ ಸಾಗಿಸುವಂತಾಗಿದೆ.
ಶೀವಶಂಕ್ರಯ್ಯ ಯರಗಂಬಳಿಮಠ 8095559645
– ಈರಯ್ಯ ಓರೆಮಠ