Advertisement

ಹಣಗಳಿಸಲು ಯುವತಿಯ ಅಪಹರಣ ಮಾಡಿದ ಕುಟುಂಬ ಪೊಲೀಸರ ವಶಕ್ಕೆ

01:32 PM Jan 23, 2022 | Team Udayavani |

ಆನೇಕಲ್‌: ಜೀವನ ನಿರ್ವಹಣೆ ಕಷ್ಟವಾಗಿ ಸಾಲ ಪಡೆದು ಅದನ್ನು ತೀರಿಸಲಾಗದೆ ಸಂಕಷ್ಟದಲ್ಲಿದ್ದ ಕುಟುಂಬ ಹಣ ಗಳಿಸಲು ಯುವತಿಯನ್ನು ಅಪಹರಿಸಿ ಒತ್ತೆಯಾಳಾಗಿಸಿ ಹಣಕ್ಕೆ ಬೇಡಿಕೆ ಇಟ್ಟು ಪೊಲೀಸರ ಅತಿಥಿಗಳಾಗಿರುವ ಘಟನೆ ಆನೇಕಲ್‌ ಉಪ ವಿಭಾಗದ ಜಿಗಣಿ ಪೊಲೀಸ್‌ ಠಾಣೆಯಲ್ಲಿ ನಡೆದಿದ್ದು ಆರೋಪಿಗಳ ಬಂಧನದ ಕುರಿತು ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿ ವಂಶಿಕೃಷ್ಣ ಮಾಹಿತಿ ನೀಡಿದರು.

Advertisement

ಘಟನೆ ವಿವರ: ಜಿಗಣಿಯ ಕೈಗಾರಿಕಾ ಪ್ರದೇಶ ದಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಏರೋಸ್ಪೇಸ್‌ ಎಂಜಿನಿಯರ್‌ ಕುಮಾರಿ ಶ್ವೇತಾ ಎಂಬ ಯುವತಿಯನ್ನುಅಪಹರಿಸಲಾಗಿತ್ತು. ಹರಿಯಾಣ ಮೂಲದ ಯುವತಿ ಏರೋಸ್ಪೇಸ್‌ ಇಂಜಿನಿಯರ್‌ ವ್ಯಾಸಂಗ ಮಾಡಿದ್ದು,ಜಿಗಣಿಯ ಎಂಎನ್‌ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಎಲೆಕ್ಟ್ರಾನಿಕ್‌ ಸಿಟಿ ಪೇಸ್‌-1 ಬಳಿ ಪಿಜಿ ಒಂದರಲ್ಲಿವಾಸವಾಗಿದ್ದ ಯುವತಿ ಪ್ರತಿ ದಿನ ದ್ವಿಚಕ್ರ ವಾಹನದಲ್ಲಿ ಜಿಗಣಿಗೆ ಕೆಲಸಕ್ಕೆ ಹೋಗಿ ಬರುತ್ತಿ ದ್ದರು. ಇದನ್ನುಗಮನಿಸಿದ ಆರೋಪಿ ಪಾರ್ಥೀಬನ್‌ ಚೆನ್ನೈ ಮೂಲದವ ನಾಗಿದ್ದು, ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದ, ಈತ ಕುಟುಂಬದೊಂದಿಗೆ ದೊಡ್ಡಕಮ್ಮನ ಹಳ್ಳಿಯಲ್ಲಿ ವಾಸವಾಗಿದ್ದ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ತುಂಬಾ ಸಾಲಮಾಡಿಕೊಂಡಿದ್ದರು. ಸಾಲತೀರಿಸಲು ಯುವತಿ ಅಪಹರಣದ ಸಂಚು ರೂಪಿಸಿದ್ದರು ಇದಕ್ಕೆ ತನ್ನ ಹೆಂಡತಿ ವಸಂತ , ಬಾಮೈದ ರವಿಚಂದ್ರನ್‌, ಸ್ನೇಹಿತ ಮೊಹಮದ್‌ಸುಲೇಮಾನ್‌ ಸಹಕಾರ ನೀಡಿದ್ದರು. ಅದೊಂದು ದಿನಪಿಜಿಯಿಂದ ದ್ವಿಚಕ್ರ ವಾಹನದಲ್ಲಿ ಜಿಗಣಿ-ಬೊಮ್ಮಸಂದ್ರ ಲಿಂಕ್‌ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್‌ ಅಡ್ಡಗಟ್ಟಿ,ಯುವತಿಯನ್ನು ಅಪಹರಿಸಿ , ಯುವತಿಯ ತಂದೆಗೆ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.

ಯುವತಿಯ ತಂದೆ ವಿಕಾಸ್‌ ಕನ್ಸ್‌ಲ್‌ ಮಗಳ ಅಪಹರಣ ಕುರಿತು ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನುಬಂಧಿಸಿ ಅವರಿಂದ 2 ಕಾರು, 2 ಮೋಟಾರ್‌ಸೈಕಲ್‌, 2ಮೊಬೈಲ್‌ ವಶಕ್ಕೆ ಪಡೆದು ಅಪಹರಣದ ಪ್ರಕರಣ ಭೇದಿಸಿ ದ್ದಾರೆ ಇಡೀ ತಂಡವನ್ನು ಅಭಿನಂದಿಸುವೆ . ಈ ಪ್ರಕರಣಭೇದಿಸಲು ಸ್ವಿಗ್ಗಿ ಯಿಂದ ಬಂದ ಊಟ ಆರೋಪಿಗಳ ಪತ್ತೆಗೆ ಪ್ರಮುಖ ಸುಳಿವು ಆಗಿತ್ತು ಎಂದು ವಂಶಿಕೃಷ್ಣ ಹೇಳಿದರು.

ವಂಚಕ ಕುಟುಂಬಕ್ಕೆ ಕೋಳ: 25 ಲಕ್ಷ ಮೌಲ್ಯದ 500 ಗ್ರಾಂಚಿನ್ನಾಭರಣ ವಶಕ್ಕೆಮನೆಯಲ್ಲಿ ಇದ್ದ ಒಡವೆಗಳನ್ನು ತಾವು ಅಡವಿಟ್ಟು ನಂತರ ಸರ್ಜಾಪುರ ಪೊಲೀಸ್‌ ಠಾಣೆಗೆ ಬಂದು ಕಳ್ಳತನವಾಗಿದೆ ಎಂದು ವಂಚಿಸುತ್ತಿದ್ದ ಆರೋಪಿಗಳಬಂಧನವಾಗಿದೆ. ಆರೋಪಿಗಳಿಂದ 25 ಲಕ್ಷ ರೂ.ಮೌಲ್ಯದ 500ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಒಂದೇ ಕುಟುಂಬದ ಸದಸ್ಯರುಗಳೆಲ್ಲರೂ ಸೇರಿ ಸಂಚು ಮಾಡಿ ತಮ್ಮಲ್ಲಿರುವ ಎಲ್ಲಚಿನ್ನ ಒಡವೆಗಳನ್ನು ಕಳವಾಗಿರುವ ಬಗ್ಗೆ ಸುಳ್ಳುದೂರು ನೀಡುತ್ತಿದ್ದರು. ತಮ್ಮ ಪರಿಚಯ ಇರುವವರಕಡೆಯಿಂದ ಒಡವೆಗಳನ್ನು ಹಣಕಾಸು ಸಂಸ್ಥೆಗಳಲ್ಲಿಗಿರವಿ ಇಡಿಸಿ, ಅದೇ ವ್ಯಕ್ತಿಯ ಮೇಲೆ ಕಳ್ಳತನದ ಆರೋಪ ಹೊರಿಸಿ ಹಣ ಸಂಪಾದನೆ ಮಾಡುತ್ತಿದ್ದಆರೋಪಿಗಳನ್ನು ಸರ್ಜಾಪುರ ಪೊಲೀಸರು ಬಂಧಿಸಿ,ಬಂಧಿತ ಆರೋಪಿಗಳಿಂದ ಸುಮಾರು 25 ಲಕ್ಷ ರೂ.ಮೌಲ್ಯದ 500 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿ ಕೊಂಡು ಆರೋಪಿಗಳಾದ ಆಶಾ, ತಂದೆ ರಪ್ರಕಾಶ್‌, ಗಂಡ ಚರಣ್‌, ತನ್ನ ಅಣ್ಣ ಮಿಥುನ್‌ ಕುಮಾರ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ವಂಶಿಕೃಷ್ಣ ತಿಳಿಸಿದರು.

ಬಹುಮಾನ ವಿತರಣೆ: ಹಲವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಆನೇಕಲ್‌ ಡಿವೈಎಸ್‌ಪಿಎಂ.ಮಲ್ಲೇಶ್‌ ತಂಡಕ್ಕೆ ಬೆಂಗಳೂರು ಗ್ರಾಮಾಂತರಎಸ್ಪಿ ಕೆ.ವಂಶಿಕೃಷ್ಣ ಹೆಬ್ಬಗೋಡಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ 50 ಸಾವಿರ ಬಹುಮಾನವನ್ನ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರಜಿಲ್ಲಾ ಅಡಿಷನಲ್‌ ಎಸ್ಪಿ ಲಕ್ಷ್ಮೀಗಣೇಶ್‌, ಆನೇಕಲ್‌ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್‌ ಸೇರಿದಂತೆ ಉಪಭಾದ ಸಿಪಿಐ, ಪಿಎಸ್‌ಐಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next