Advertisement

ತಿರುಪತಿ ತಿಮ್ಮಪ್ಪನಿಗೆ ಒಂದೇ ದಿನದಲ್ಲಿ ಬರೋಬ್ಬರಿ 10 ಕೋಟಿ ರೂ. ದೇಣಿಗೆ

10:21 PM Jun 07, 2022 | Team Udayavani |

ತಿರುಪತಿ: ತಿರುಪತಿ ತಿಮ್ಮಪ್ಪನಿಗೆ ಒಂದೇ ದಿನದಲ್ಲಿ ಬರೋಬ್ಬರಿ 10 ಕೋಟಿ ರೂ. ದೇಣಿಗೆ ಬಂದಿದೆ. ತಮಿಳುನಾಡು ಮೂಲದ ಭಕ್ತರಾಗಿರುವ ಗೋಪಾಲ ಬಾಲ ಕೃಷ್ಣ ಅವರು ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ)ನ ವಿವಿಧ ಟ್ರಸ್ಟ್‌ಗಳಿಗೆ ಒಟ್ಟು 7 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ.

Advertisement

ಪ್ರಾಣದಾನ ಟ್ರಸ್ಟ್‌, ಗೋಸಂರಕ್ಷಣಾ ಟ್ರಸ್ಟ್‌, ಬಿಐಆರ್‌ಆರ್‌ಡಿ, ವೇದ ಪರಿರಕ್ಷಣಾ ಟ್ರಸ್ಟ್‌, ಅನ್ನ ಪ್ರಸಾದಂ ಟ್ರಸ್ಟ್‌, ಸರ್ವ ಶ್ರೇಯಸ್‌ ಟ್ರಸ್ಟ್‌ ಮತ್ತು ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌ಗೆ ತಲಾ ಒಂದೊಂದು ಕೋಟಿ ರೂ. ದೇಣಿಗೆ ಕೊಡಲಾಗಿದೆ.

ಇದರ ಜತೆಯಲ್ಲಿ ಮೂರು ಖಾಸಗಿ ಸಂಸ್ಥೆಗಳು ಟಿಟಿಡಿಗೆ ತಲಾ ಒಂದೊಂದು ಕೋಟಿ ರೂ. ದೇಣಿಗೆ ಕೊಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next