Advertisement

ಸೇಡು ತೀರಿಸಲು ನೀರು ಪೂರೈಕೆ ಬಂದ್‌?

12:02 AM Jan 14, 2022 | Team Udayavani |

ತಿರುಪತಿ: ತಿರುಪತಿಯ ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಘಟನೆ ನಡೆದಿದೆ. ಏರ್‌ಪೋರ್ಟ್‌ಗೆ  ತಿರುಪತಿ ನಗರಪಾಲಿಕೆ ಉಪ ಮೇಯರ್‌ ಅಭಿನಯ ರೆಡ್ಡಿ  ಪ್ರವೇಶಿಸಲು ಯತ್ನಿಸಿದಾಗ, ಅಧಿಕಾರಿಗಳು ತಡೆದಿದ್ದಾರೆ.

Advertisement

ಅದಾದ ನಂತರ ವಿಮಾನ ನಿಲ್ದಾಣ, ಅಲ್ಲಿನ ಸಿಬ್ಬಂದಿ ನಿವಾಸಕ್ಕೆ ನೀರು ಪೂರೈಕೆ ಬಂದ್‌ ಆಗಿದೆ! ರೆಡ್ಡಿ ಸೇಡು ತೀರಿಸಿಕೊಳ್ಳಲೆಂದೇ ಹೀಗೆ ಮಾಡಿದ್ದಾರೆಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಪೈಪ್‌ಲೈನ್‌ ಕಟ್ಟಿಕೊಂಡಿದ್ದರಿಂದ ನೀರು ಪೂರೈಕೆ ಬಂದ್‌ ಆಗಿದೆ ಎಂದು ನಗರಪಾಲಿಕೆ ಸಮಜಾಯಿಷಿ ನೀಡಿದೆ.

ಅಭಿನಯ ರೆಡ್ಡಿ ಶಾಸಕ ಬಿ.ಕರುಣಾಕರ ರೆಡ್ಡಿ ಪುತ್ರ. ಈ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next