Advertisement

ಹಾರರ್‌ ಚಿತ್ರದಲ್ಲಿ ಅನುಶ್ರೀ

11:37 AM Jan 04, 2022 | Team Udayavani |

ನಿರ್ದೇಶಕ ಲೋಹಿತ್‌ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಾ, ತನ್ನ ಜೊತೆಗಿರುವವರಿಗೆ ಅವಕಾಶ ನೀಡುತ್ತಿರುತ್ತಾರೆ. ಈಗ ಅದೇ ರೀತಿ ಸ್ನೇಹಿತರ ಜೊತೆ ಸೇರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಾರಿ ವಿಭಿನ್ನವಾದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿ ದ್ದಾರೆ. ಅದು ಸೈತಾನ್‌ ಕುರಿತು. ಅಲ್ಲಿಗೆ ಇದು ಹಾರರ್‌ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದೇವರನ್ನು ಗುಡಿ ನಂಬುವಂತೆ ಸೈತಾನ್‌ಗೆ ಗುಡಿ ಕಟ್ಟಿ ನಂಬುವ ವರ್ಗವೊಂದಿದೆ. ಅದರ ಸುತ್ತ ಚಿತ್ರ ಮಾಡಲು ಲೋಹಿತ್‌ ಮತ್ತು ತಂಡ ರೆಡಿಯಾಗಿದೆ.

Advertisement

ಅಂದಹಾಗೆ, ಈ ಚಿತ್ರವನ್ನು ಪ್ರಭಾಕರ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ದೇವಕಿ’ ಹಾಗೂ “ಮಮ್ಮಿ’ ಸಿನಿಮಾಗಳಿಗೆ ಸಹಾಯಕರಾಗಿದ್ದ ಪ್ರಭಾಕರ್‌ ಈಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರವನ್ನು ಲೋಹಿತ್‌ ಎಚ್‌ ಪ್ರೊಡಕ್ಷನ್ಸ್‌ ಹಾಗೂ ಎಸ್‌ಎಂಪಿ ಪ್ರೊಡಕ್ಷನ್‌ ಜೊತೆಯಾಗಿ ನಿರ್ಮಿಸುತ್ತಿದೆ. ಈ ಚಿತ್ರದ ಮೂಲಕ ಉದ್ಯಮಿ ಪಾರ್ಥಿಬನ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮುಂದೆ ಒಳ್ಳೆಯ ಸಿನಿಮಾ ಮಾಡುವ ಗುರಿ ಹೊಂದಿದ್ದಾರೆ.

ಇದನ್ನೂ ಓದಿ: ಟಾಲಿವುಡ್‌ ಕಡೆಗೆ ಸಲಗ ಸಂಚಾರ: ಬಾಲಕೃಷ್ಣ ಚಿತ್ರದಲ್ಲಿ ವಿಜಯ್ ನಟನೆ

ಅಂದಹಾಗೆ, ಈ ಚಿತ್ರದಲ್ಲಿ ಅನುಶ್ರೀ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ದೊಡ್ಡ ಗ್ಯಾಪ್‌ನ ನಂತರ ಅನುಶ್ರೀ ಸಿನಿಮಾದಲ್ಲಿ ನಟಿಸಿದಂತಾಗಿದೆ. ಉಳಿದಂತೆ ಇದೊಂದು ಪಾತ್ರಗಳ ಸುತ್ತ ಸುತ್ತುವ ಸಿನಿಮಾವಾಗಿದ್ದು, ಇನ್ನಷ್ಟು ಪಾತ್ರಗಳು ಸೇರಿಕೊಳ್ಳಲಿವೆ. ಚಿತ್ರದ ಬಗ್ಗೆ ಮಾತನಾಡುವ ಅನುಶ್ರೀ, “ನಾನು ತುಂಬಾ ಸಮಯದ ನಂತರ ಒಪ್ಪಿಕೊಂಡ ಚಿತ್ರ. ಮನಸ್ಸಿಗೆ ತುಂಬಾ ಹತ್ತಿರವಾದ ಪಾತ್ರ. ಇದು ಹಾರರ್‌ ಸಿನಿಮಾ. ನನ್ನ ಪಾತ್ರ ಕೂಡಾ ಚೆನ್ನಾಗಿದೆ’ ಎನ್ನುತ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next