Advertisement

Congress: ಸರಕಾರದಲ್ಲಿ ಅರಾಜಕತೆ: ಬೊಮ್ಮಾಯಿ

11:04 PM Oct 08, 2023 | Team Udayavani |

ಬಂಕಾಪುರ: ಕಾಂಗ್ರೆಸ್‌ ಸರಕಾರದಲ್ಲಿ ಅರಾಜಕತೆ ಎದ್ದು ಕಾಣುತ್ತಿದೆ. ರೈತರು ಬರಗಾಲ ಛಾಯೆಯಿಂದ ಬಸವಳಿದರೆ, ಅಲ್ಲಲ್ಲಿ ಕೋಮು ಗಲೆಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರ ಕಾಳಜಿ ಮರೆತ ಸರಕಾರ ಮುಸ್ಲಿಮರ ಓಲೈಕೆಗೆ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾವಿ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಈ ಭಾಗದ ರೈತರು ಸತತ ಮೂರು ದಿನಗಳಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.

Advertisement

ಕೂಡಲೇ ಶಿಗ್ಗಾವಿ, ಹಾನಗಲ್‌, ಬ್ಯಾಡಗಿ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಬೇಕು. ಗ್ರಾಪಂ ಮಟ್ಟದಲ್ಲಿ ಬಾರ್‌ ತೆಗೆಯಲು ಮುಂದಾದ ಸರಕಾರ ರೈತರ ಸಂಕಷ್ಟಕ್ಕೆ ಮುಂದಾಗದೇ ಇರುವುದು ನೋವಿನ ಸಂಗತಿ. ಬರಗಾಲವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದ ಸರಕಾರ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೊರಟಿದೆ. ಕಾವೇರಿ ನೀರಿನ ವಿಚಾರದಲ್ಲೂ ರಾಜ್ಯ ಸರಕಾರ ದ್ವಂದ್ವ ನಿಲುವು ತಾಳಿದೆ. ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಲಾಗಿದೆಯೇ ಹೊರತು ಜಾತಿ ಗಣತಿ ಅಲ್ಲ ಎಂಬುದನ್ನು ಸಿಎಂ ಸ ಷ್ಟಪಡಿಸಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next