Advertisement

ಉದ್ಧ ನಾಮದ ಭಯ;ಸಿದ್ದರಾಮಯ್ಯಗೆ ಟ್ವೀಟ್‌ನಲ್ಲಿ ಕುಟುಕಿದ ಸಚಿವ ಹೆಗಡೆ

12:18 PM Mar 06, 2019 | |

ಬೆಂಗಳೂರು : ಉದ್ದಕ್ಕೆ ನಾಮ ಹಾಕುವವರನ್ನು ಕಂಡರೆ ಭಯ ಎಂದು ಹೇಳಿಕೆ ನೀಡಿ ವ್ಯಾಪಕವಾಗಿ ಟ್ರೋಲ್‌ಗೆ ಗುರಿಯಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ. 

Advertisement

ಸಿದ್ದರಾಮಯ್ಯ ಅವರು ಹಣೆ ತುಂಬಾ ಅರಶಿನ ಕುಂಕುಮ ಹಚ್ಚಿಕೊಂಡಿರುವ ಫೋಟೋವನ್ನು ಪೋಸ್ಟ್‌ ಮಾಡಿ ಅಯ್ಯೋ..! ಭಯ ಭೀತಿಗೊಳ್ಳಬೇಡಿ… ಇವರು ಹಣೆಯಲ್ಲಿ ತಿಲಕವಿಟ್ಟುಕೊಂಡ ಹಿಂದುಗಳನ್ನು ಕಂಡರೆ ಗಾಬರಿಯಾಗುವ ನಮ್ಮ ಸಿದ್ಧಣ್ಣ! ಎಂದು ಬರೆದಿದ್ದಾರೆ. 

ಸಿದ್ದರಾಮಯ್ಯ ಹೇಳಿಕೆ ವಿರೋಧಿಸಿ ನೂರಾರು ಮಂದಿ ಸಾಮಾಜಿಕ ತಾಣಗಳಲ್ಲಿ ಟೀಕೆಗಳ ಮಳೆಯನ್ನೆ ಸುರಿಸುತ್ತಿದ್ದಾರೆ. ಕೆಲವರು ತಿಲಕವಿಟ್ಟುಕೊಂಡಿರುವ ರಾಹುಲ್‌ ಗಾಂಧಿ ಅವರ ಫೋಟೋವನ್ನು ಪೋಸ್ಟ್‌ ಮಾಡಿ ಪ್ರಶ್ನೆ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next