Advertisement

ಹಳೆಯ ಅವತಾರದಲ್ಲಿ ಬರ್ತಾರೆ ಶ್ರೀರಾಮುಲು: ಆನಂದ್‌ ಸಿಂಗ್‌

09:54 PM Oct 22, 2022 | Team Udayavani |

ಬಳ್ಳಾರಿ: ಹಳೇ ಶ್ರೀರಾಮುಲು ಬಗ್ಗೆ ಗೊತ್ತಿಲ್ಲ. ಗೊತ್ತಿದ್ದರೆ ಅವರ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿರಲಿಲ್ಲ. ಮುಂಬರುವ ಚುನಾವಣೆಯಲ್ಲಿ ಶ್ರೀರಾಮುಲು ಅವರು ಹಳೆ ಅವತಾರ ತಳೆಯಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ನಡೆದ ಎಸ್‌ಟಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀರಾಮುಲು ಅವರು ತಮ್ಮ ಆತ್ಮವಿಶ್ವಾಸ ಮತ್ತು ಸರ್ಕಾರದ ಮೇಲಿನ ನಂಬಿಕೆಯಿಂದ ಮೀಸಲಾತಿಯನ್ನು 24 ಗಂಟೆಯೊಳಗೆ ಕೊಡಿಸುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದ ಅದು ಸಾಧ್ಯವಾಗಿಲ್ಲ. ಅದನ್ನೇ ನೆಪವಾಗಿಸಿಕೊಂಡು ಎಲ್ಲರೂ ಮಾತನಾಡುವವರೇ ಆಗಿದ್ದಾರೆ. ಅವರಿಗೆ ಹಳೆ ಶ್ರೀರಾಮುಲು ಬಗ್ಗೆ ಗೊತ್ತಿಲ್ಲ. ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಮೀಸಲಾತಿ ವಿಷಯದಲ್ಲಿ ಟೀಕೆ ಮಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಿಸಲು ಶ್ರೀರಾಮುಲು ಅವರು, ಮುಖ್ಯಮಂತ್ರಿಗಳ ಬಳಿಗೆ ಹಲವು ಬಾರಿ ಹೋಗಿ ಒತ್ತಡ ಹೇರಿದ್ದಾರೆ. ಇಷ್ಟು ನಿಧಾನವಾಗಿದ್ದರೆ ಇದು ಆಗಲ್ಲ. ಏನಾದರೂ ಮಾಡಬೇಕು ಎಂದು ನಾನೇ ಹಲವು ಬಾರಿ ತಿಳಿಸಿದ್ದೇನೆ. ಆದರೆ ರಾಮುಲು ಅವರು, ತಾಳ್ಮೆಯೇ ಆಯುಧ, ಧೈರ್ಯವೇ ನಮ್ಮ ಗುರಿ ಎಂದು ನನಗೂ ತಾಳ್ಮೆ ಕಲಿಸಿಕೊಟ್ಟಿದ್ದಾರೆ. ಆದರೂ 2023ರ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ರಾಜಕಾರಣದ ಚದುರಂಗದ ಆಟ ಆಡೋಣ ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next