Advertisement

Anadapura ಬಳಿ ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ

05:10 PM Oct 01, 2024 | Kavyashree |

ಆನಂದಪುರ: ಸಮೀಪದ ಅಂದಾಸೂರ ತೀರ್ಥಹಳ್ಳಿ ರಸ್ತೆಯ ರೈಲ್ವೆ ಗೇಟ್ ಸಮೀಪದಲ್ಲಿ ರೈಲ್ವೆ ಹಳಿಯ ಮೇಲೆ ಯುವಕನೋರ್ವನ ಶವ ಆ.1ರ ಮಂಗಳವಾರ ಪತ್ತೆಯಾಗಿದೆ.

Advertisement

ಈತ ದಾವಣಗೆರೆ ಮೂಲದ ಬಸವರಾಜ್ ಎಂದು ತಿಳಿದು ಬಂದಿದೆ.

ಈತನ ಮೃತದೇಹ ರೈಲ್ವೆ ಹಳಿಯಲ್ಲಿ ದೊರೆತಿದೆ. ಈತ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ದೇಹ ಛಿದ್ರವಾಗಬೇಕಿತ್ತು. ಆದರೆ ಆತನ ತಲೆಗೆ ಮಾತ್ರ ಬಲವಾದ ಪೆಟ್ಟು ಬಿದ್ದಿದ್ದು, ರೈಲ್ವೆ ಹಳಿಯ ಮಧ್ಯಭಾಗದಲ್ಲಿ ಮೃತದೇಹ ಬಿದ್ದಿದ್ದು, ಈತನನ್ನು ಯಾರೋ ಕೊಲೆ ಮಾಡಿ ಹಾಕಿರಬಹುದು ಎಂದು ಸಾರ್ವಜನಿಕರಿಂದ ಅನುಮಾನ ವ್ಯಕ್ತವಾಗಿದೆ.

ಇದು ಕೊಲೆಯೂ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸರ ತನಿಖೆಯ ಬಳಿಕ  ತಿಳಿದು ಬರಬೇಕಾಗಿದೆ.

ವಿಷಯ ತಿಳಿದ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು  ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಗೆ ಸಾಗಿಸಲಾಗಿದೆ.

Advertisement

ಶಿವಮೊಗ್ಗ ಪೊಲೀಸ್ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next