Advertisement
ಉದ್ಘಾಟನಾ ಸಮಾರಂಭದಲ್ಲಿ, ನೀತಾ ಅಂಬಾನಿ ಮಾತನಾಡಿ, “ಸಾಂಸ್ಕೃತಿಕ ಕೇಂದ್ರವು ಪಡೆಯುತ್ತಿರುವ ಬೆಂಬಲದಿಂದ ನಾನು ಸಂತುಷ್ಟಗೊಂಡಿದ್ದೇನೆ. ಇದು ವಿಶ್ವದ ಅತ್ಯುತ್ತಮ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ. ಎಲ್ಲ ಕಲೆ ಮತ್ತು ಕಲಾವಿದರಿಗೆ ಇಲ್ಲಿ ಸ್ವಾಗತ. ಸಣ್ಣ ಪಟ್ಟಣಗಳು ಮತ್ತು ದೂರದ ಪ್ರದೇಶಗಳ ಯುವಕರು ಇಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶ ಪಡೆಯುತ್ತಾರೆ. ವಿಶ್ವದ ಅತ್ಯುತ್ತಮ ಪ್ರದರ್ಶನಗಳು ಇಲ್ಲಿಗೆ ನಡೆಯಲಿವೆ ಎಂದು ನಾನು ಭಾವಿಸುತ್ತೇನೆ,” ಎಂದರು.
ಸೂಪರ್ ಸ್ಟಾರ್ ರಜನಿಕಾಂತ್, ಅಮೀರ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕ್ ಚೋಪ್ರಾ, ವರುಣ್ ಧವನ್, ಸೋನಮ್ ಕಪೂರ್, ಅನುಪಮ್ ಖೇರ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ, ಸುನೀಲ್ ಶೆಟ್ಟಿ, ಶಾಹಿದ್ ಕಪೂರ್, ವಿದ್ಯಾ ಬಾಲನ್, ಆಲಿಯಾ ಭಟ್, ದಿಯಾ ಮಿರ್ಜಾ, ಶ್ರದ್ಧಾ ಕಪೂರ್, ರಾಜು ಹಿರಾನಿ, ತುಷಾರ್ ಕಪೂರ್ ಹೀಗೆ ಇಡೀ ಸಂಜೆ ಬಾಲಿವುಡ್ ತಾರೆಯರಿಂದ ತುಂಬಿತ್ತು. ಕೈಲಾಶ್ ಖೇರ್ ಮತ್ತು ಮೇಮ್ ಖಾನ್ ಸಹ ಉಪಸ್ಥಿತರಿದ್ದರು.
Related Articles
Advertisement
ಸದ್ಗುರು ಜಗ್ಗಿ ವಾಸುದೇವ್, ಸ್ವಾಮಿ ನಾರಾಯಣ ಪಂಥದ ರಾಧಾನಾಥ್ ಸ್ವಾಮಿ, ರಮೇಶ್ ಭಾಯಿ ಓಜಾ, ಸ್ವಾಮಿ ಗೌರ್ ಗೋಪಾಲ್ ದಾಸ್ ಮೊದಲಾದ ಆಧ್ಯಾತ್ಮಿಕ ಗುರುಗಳು ಉಪಸ್ಥಿತರಿದ್ದರು.