Advertisement

J&K ಕಾಶ್ಮೀರಿ ಪಂಡಿತರ ಸಂಘಟನೆಯೊಂದು ಕಾಂಗ್ರೆಸ್‌ನಲ್ಲಿ ವಿಲೀನ

12:57 AM Apr 14, 2024 | Team Udayavani |

ಜಮ್ಮು: ಜಮ್ಮು-ಕಾಶ್ಮೀರದ ಕಾಶ್ಮೀರಿ ಪಂಡಿತರ ಸಂಘಟನೆಯೊಂದು ಶನಿವಾರ ಕಾಂಗ್ರೆಸ್‌ ಜತೆಗೆ ವಿಲೀನಗೊಂಡಿದೆ. 1998ರಲ್ಲಿ ಸ್ಥಾಪಿತವಾಗಿದ್ದ ಅಖೀಲ ಭಾರತ ಕಾಶ್ಮೀರಿ ಹಿಂದೂ ವೇದಿಕೆಯ ನೂರಾರು ಸದಸ್ಯರು ಕಾಂಗ್ರೆಸ್‌ ಸೇರಿದ್ದಾರೆ. ಕಾಶ್ಮೀರಿ ಪಂಡಿತರ ಸಂಕಷ್ಟಗಳನ್ನು ಚುನಾವಣ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ ಬಿಜೆಪಿಗರು, ಅಧಿಕಾರಕ್ಕೆ ಬಂದರೆ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಹೇಳಿದ್ದರು. ಆದರೆ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಕಾಶ್ಮೀರಿ ಪಂಡಿತರಿಗೆ 10 ಪೈಸೆಯ ಕೆಲಸವನ್ನೂ ಮಾಡಿಲ್ಲ. ಕೇಂದ್ರ ಬಿಜೆಪಿ ಸರಕಾರ ಕಾಶ್ಮೀರಿ ಪಂಡಿತ ಸಮುದಾಯದವರನ್ನು ವಂಚಿಸಿದೆ. ಹಾಗಾಗಿ ಎಲ್ಲ ಕಾಶ್ಮೀರಿ ಪಂಡಿತರ ಸಂಘಟನೆಗಳು ಕಾಂಗ್ರೆಸ್‌ ಸೇರಬೇಕು ಎಂದು ಜಮ್ಮು-ಕಾಶ್ಮೀರ ಕಾಂಗ್ರೆಸ್‌ ಅಧ್ಯಕ್ಷ ವಿಕಾರ್‌ ರಸೂಲ್‌ ವಾನಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next