Advertisement
ಕೌಡಿಚ್ಚಾರು ಸಮೀಪ ರಸ್ತೆಗೆ ಹೊಂದಿಕೊಂಡು ಅಪಾಯಕಾರಿ ತೆರೆದ ಬಾವಿ ಇದ್ದು, ಈ ಮೊದಲು ಅಪಾಯ ಸಂಭವಿಸಿರುವುದರಿಂದ ಮತ್ತು ಬಾವಿಯ ಕಡೆಗೆ ರಸ್ತೆ ಕುಸಿತ ಉಂಟಾಗುತ್ತಿದೆ. ಈ ಅಪಾಯದ 200 ಮೀ. ಅಂತರದಲ್ಲಿ ಶೇಖಮಲೆಯಲ್ಲಿರುವ ಸೇತುವೆ ಮೇಲಿನ ಎರಡೂ ಬದಿಯ ರಸ್ತೆ ಮಧ್ಯೆ ಕುಸಿತ ಉಂಟಾಗಿದ್ದು, ಸಂಚಾರ ಅಪಾಯಕಾರಿಯಾಗಿದೆ.
Related Articles
Advertisement
ಸೇತುವೆ ರಸ್ತೆಯಲ್ಲಿ ಕುಸಿತಶೇಖಮಲೆ ಅಟಲ್ ನಗರದ ಬಳಿ ಇರುವ ಸೇತುವೆಯಲ್ಲಿ ಸಾಗುವ ರಸ್ತೆಯ ಎರಡೂ ಮುಕ್ತಾಯಗಳಲ್ಲಿ ಒಂದೆರಡು ಅಡಿಯಷ್ಟು ಡಾಮರು ಸಹಿತ ರಸ್ತೆ ಕುಸಿತಗೊಂಡು ಹೊಂಡ ನಿರ್ಮಾಣವಾಗಿದೆ. ವೇಗವಾಗಿ ಬರುವ ದ್ವಿಚಕ್ರ ವಾಹನಗಳಂತೂ ಹೊಂಡಕ್ಕೆ ಬಿದ್ದು, ಆಳೆತ್ತರಕ್ಕೆ ಜಿಗಿಯುತ್ತವೆ. ಸೇತುವೆಯೂ ಕಿರಿದಾಗಿರುವುದರಿಂದ ಮತ್ತು ತಿರುವಿನ ರಸ್ತೆ ಆಗಿರುವುದರಿಂದ ಸವಾರರಿಗೆ ಮಾರಣಾಂತಿಕವಾಗಿ ಪರಿಣಮಿಸಿವೆ. ತಡೆಬೇಲಿ ಆಗಬೇಕು
ರಸ್ತೆ ಬದಿಯ ತೆರೆದ ಬಾವಿ ಕಂಡಾಗ ಭಯ ಉಂಟಾಗುತ್ತದೆ. ರಾತ್ರಿ ಸಂಚಾರವಂತೂ ಅಪಾಯಕಾರಿ. ತತ್ಕ್ಷಣ ತಡೆಬೇಲಿ ನಿರ್ಮಿಸಬೇಕು.
– ದಿವಾಕರ ನನ್ಯ, ನಿತ್ಯ ಪ್ರಯಾಣಿಕ ಶೀಘ್ರ ಕ್ರಮ ಕೈಗೊಳ್ಳುತ್ತೇವೆ
ಹಿಂದೆ ರಸ್ತೆ ನಿರ್ವಹಿಸುತ್ತಿದ್ದ ಕೆಆರ್ಡಿಸಿಎಲ್ ಬಾವಿ ಮುಚ್ಚದೆ ಏಕೆ ಬಿಟ್ಟಿದೆ ಗೊತ್ತಿಲ್ಲ. ರಸ್ತೆಗೆ ಸಂಬಂಧಪಟ್ಟಂತೆ ಜಾಗ ಸ್ವಾಧೀನ ಆಗಿದೆಯೋ ಪರಿಶೀಲಿಸುತ್ತೇವೆ. ಹೆದ್ದಾರಿಯ 40 ಕಿ.ಮೀ. ಮರು ಡಾಮರು ಕಾಮಗಾರಿಗೆ 14 ಕೋಟಿ ರೂ. ಮಂಜೂರಾಗಿದೆ. ಕಾಮಗಾರಿ ನಡೆಸುವ ಸಂದರ್ಭ ಬಾವಿ ಮುಚ್ಚುತ್ತೇವೆ ಅಥವಾ ಪರ್ಯಾಯ ಕ್ರಮ ಕೈಗೊಳ್ಳುತ್ತೇವೆ. ಹೆದ್ದಾರಿ ವ್ಯಾಪ್ತಿಯ 5-6 ಸೇತುವೆ ಅಭಿವೃದ್ಧಿಗೂ ಅಂದಾಜು ಪಟ್ಟಿ ತಯಾರಿಸಲು ಸೂಚನೆ ಬಂದಿದ್ದು, ಶೀಘ್ರ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
– ನಾಗರಾಜ್, ಸಹಾಯಕ ಎಂಜಿನಿಯರ್, ಹೆದ್ದಾರಿ ಇಲಾಖೆ ರಾಜೇಶ್ ಪಟ್ಟೆ