Advertisement

Tragic: ಬೈಕ್‌ ಸ್ಕಿಡ್ಡಾಗಿ ಬಿದ್ದು ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು  

10:20 PM Feb 22, 2024 | Team Udayavani |

ಕಾರ್ಕಳ: ಕಾರ್ಕಳ ಸಮೀಪ ದೂಪದಕಟ್ಟೆ ಸಮೀಪ ಪರ್ಪಲೆ ಗುಡ್ಡದ ತಿರುವಿನಲ್ಲಿ ಬೈಕ್‌ ಸ್ಕಿಡ್ಡಾಗಿ ಬಿದ್ದು  ಸವಾರ ಇಂಜಿಯರಿಂಗ್‌ ವಿದ್ಯಾರ್ಥಿ ಮೃತ ಪಟ್ಟ ಹಾಗೂ ಸಹಸವಾರ ಗಾಯಗೊಂಡ ಘಟನೆ ಗುರುವಾರ(ಫೆ.22 ರಂದು) ನಡೆದಿದೆ.

Advertisement

ಮೃತ ವಿದ್ಯಾರ್ಥಿ ಬ್ರಹ್ಮಾವರ ನಿವಾಸಿ ಆಕಾಶ್‌ ಕಾಂಚನ್‌(18) ಎಂಬವರಾಗಿದ್ದಾರೆ.

ನಿಟ್ಟೆಯ ಖಾಸಗಿ ಕಾಲೇಜಿನಲ್ಲಿ ಮೆಕ್ಯಾನಿಕ್‌ ಇಂಜಿನಿಯರಿಂಗ್‌ ಓದುತಿದ್ದರು. ಕಾಲೇಜಿನಲ್ಲಿ ವಾರ್ಷಿಕೋತ್ಸವ ಇದ್ದ ಕಾರಣ ಸ್ನೇಹಿತರೊಡಗೂಡಿ ಪ್ರತ್ಯೇಕ ಬೈಕ್‌ಗಳಲ್ಲಿ ವಿದ್ಯಾರ್ಥಿಗಳು ತೆರಳುತಿದ್ದ ವೇಳೆ ಘಟನೆ ಸಂಭವಿಸಿದೆ.

ಘಟನೆಯಲ್ಲಿ  ಸವಾರ, ಸಹಸವಾರ ವಿದ್ಯಾರ್ಥಿಗಳಿಬ್ಬರು  ರಸ್ತೆಗೆ ಎಸೆಯಕ³ಟ್ಟು  ಆಕಾಶ್‌ ಗಂಭೀರ ಗಾಯಗೊಂಡು ಮೃತಪಟ್ಟರೆ, ಸಹಸವಾರ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next