Advertisement

ಮಂಡ್ಯ; ಆಡುವಾಗ ಬಿದ್ದು ಮೃತಪಟ್ಟ ಎಂಟು ವರ್ಷದ ಬಾಲಕ

04:12 PM Oct 02, 2022 | Team Udayavani |

ಮಂಡ್ಯ: ಆಟ ಆಡುವಾಗ ಆಯತಪ್ಪಿ ಬಿದ್ದು ಎಂಟು ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ನೆಡೆದಿದೆ.

Advertisement

ಕೃಷ್ಣರಾಜಪೇಟೆ ತಾಲ್ಲೂಕಿನ ಐನೋರಹಳ್ಳಿ ಗ್ರಾಮದ ಪುನೀತಾ – ಚಂದ್ರಹಾಸ ದಂಪತಿಗಳ ಪುತ್ರ ಚಿರಂತ್ ಗೌಡ ಮೃತಪಟ್ಟ ದುರ್ದೈವಿ.

ಕಿಕ್ಕೇರಿಯ ಕೇಂಬ್ರಿಡ್ಜ್ ಪಬ್ಲೀಕ್ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ 8 ವರ್ಷದ ಚಿರಂತ್ ಗೌಡ ಇಂದು ಮಧ್ಯಾಹ್ನ ಆಟ ಆಡುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ:ಉದ್ಧವ್ ಠಾಕ್ರೆಗೆ ದೊಡ್ಡ ಹೊಡೆತ; ಏಕನಾಥ್ ಶಿಂಧೆ ಬಣ ಸೇರಿದ 3000 ಶಿವಸೇನೆ ಸದಸ್ಯರು

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೇಂಬ್ರಿಡ್ಜ್ ಪಬ್ಲಿಕ್‌ ಶಾಲೆಯ ಸಂಸ್ಥಾಪಕರು ಶಾಲಾ ಮಕ್ಕಳು ಐನೋರಹಳ್ಳಿ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next