Advertisement

ವೈದ್ಯರ ಜತೆ ರೋಗಿಗೆ ನೆರವಾದ ಮಂಗಳೂರು ಮೂಲದ ಗಗನಸಖಿ

12:22 AM Nov 16, 2022 | Team Udayavani |

ಮಂಗಳೂರು: ಲಂಡನ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯ ಪ್ರಾಣ ರಕ್ಷಣೆಗೆ ವೈದ್ಯರ ಜತೆ ಮಂಗಳೂರು ಮೂಲದ ಗಗನಸಖಿ ನೆರವಾಗಿ ಗಮನ ಸೆಳೆದಿದ್ದಾರೆ.

Advertisement

ಘಟನೆ ಬಗ್ಗೆ ವೈದ್ಯ, ಮೂಲತಃ ಬೆಂಗಳೂರಿನವರಾದ ಲಂಡನ್‌ನಲ್ಲಿ ವೃತ್ತಿ ಮಾಡುತ್ತಿರುವ ಡಾ| ವಿಶ್ವರಾಜ್‌ ವೇಮಲ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನ. 12ರಂದು ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿರುವಾಗ 43 ವರ್ಷದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಏನು ಮಾಡುವುದು ಎಂದು ಚಿಂತಿಸುತ್ತಿದ್ದಾಗ, ತನ್ನಲ್ಲಿರುವ ಆಟೋಮೇಟೆಡ್‌ ಎಕ್ಸ್‌ಟರ್ನಲ್‌ ಡಿಫಿಬ್ರಿಲೇಟರ್‌ (ಎಇಡಿ) ನೆರವಾಯಿತು.

ಈ ವೇಳೆ ಗಗನಸಖಿಯರಾದ ಮಲ್ಲಿಶಾ ಹಾಗೂ ಮಂಗಳೂರಿನವರಾದ ಗಿರಿಥಾ ನೆರವಾಗಿದ್ದಾರೆ. ಅಂತಿಮವಾಗಿ ವಿಮಾನವನ್ನು ಮುಂಬಯಿಯಲ್ಲಿ ಇಳಿಸಿ ತುರ್ತು ನಿಗಾ ಘಟಕಕ್ಕೆ ಹಸ್ತಾಂತರಿಸಲಾಯಿತು. ಈ ವೇಳೆ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಡಾ| ವಿಶ್ವರಾಜ್‌ ಬರೆದುಕೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next