Advertisement

ಪ್ಲಾಸ್ಟಿಕ್‌ ಸ್ಟ್ರಾ ನಿಷೇಧ ಜಾರಿ ತಡ ಮಾಡಿ: ಕೇಂದ್ರಕ್ಕೆ ಅಮುಲ್‌ ಪತ್ರ

11:41 AM Jun 10, 2022 | Team Udayavani |

ನವದೆಹಲಿ: ಜು.1ರಿಂದ ಹಾಲು, ಜ್ಯೂಸ್‌ ಸೇರಿದಂತೆ ಇನ್ನಿತರೆ ದ್ರವಾಹಾರ ಪ್ಯಾಕ್‌ಗಳಲ್ಲಿ ಪ್ಲಾಸ್ಟಿಕ್‌ ಸ್ಟ್ರಾ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೆ ಈ ಕ್ರಮದ ಜಾರಿಯನ್ನು ಒಂದು ವರ್ಷ ತಡ ಮಾಡಿದರೆ, 10 ಕೋಟಿ ರೈತರಿಗೆ ಅನುಕೂಲವಾಗುತ್ತದೆ ಎಂದು ಅಮುಲ್‌ ಕಂಪನಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

Advertisement

ಅಮುಲ್‌ ವಿಶ್ವದ ಬೃಹತ್‌ ಹಾಲು ಉತ್ಪನ್ನ ಕಂಪನಿ. ಅದರ ವ್ಯವಸ್ಥಾಪಕ ನಿರ್ದೇಶಕ ಆರ್‌.ಎಸ್‌.ಸೋಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಕೋಟ್ಯಂತರ ಮಂದಿ ಹಾಲಿನ ಉತ್ಪನ್ನಗಳನ್ನು ನಂಬಿ ಬದುಕುತ್ತಿದ್ದಾರೆ.

ಈ ನಿಷೇಧ ಜಾರಿಯನ್ನು ತುಸು ವಿಳಂಬ ಮಾಡಿದರೆ ರೈತರಿಗೆ ಬಹಳ ನಿರಾಳವೆನಿಸುತ್ತದೆ ಎಂದಿದ್ದಾರೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆಯೇ ನಿರ್ಧರಿಸಿದ್ದಂತೆ ಜು.1ರಿಂದ ಕೇವಲ ಒಂದೇ ಬಾರಿಗೆ ಮಾತ್ರ ಉಪಯುಕ್ತವಾಗುವ ಪ್ಲಾಸ್ಟಿಕ್‌ ಸ್ಟ್ರಾ ನಿಷೇಧವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next