Advertisement

ಅಮೃತೋತ್ಸವ  – 2017: ಸಾಧನಾ ಸಂಗಮ

09:34 AM Oct 16, 2017 | |

ಬೋಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಜನ್ಮ ದಿನದ ಅಂಗವಾಗಿ ಅಮೃತೋತ್ಸವ 2017: ಸಾಧನಾ ಸಂಗಮ ಕಾರ್ಯಕ್ರಮವು ನಗರದ ಬೋಳೂರು ಶ್ರೀ ಅಮೃತಾನಂದಮಯಿ ಮಠದಲ್ಲಿ ರವಿವಾರ ಶಾಖಾ ಮಠದ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅವರ ನೇತೃತ್ವದಲ್ಲಿ ಜರಗಿತು.

Advertisement

ಬೆಳಗ್ಗೆ ಮಹಾಗಣಪತಿ ಹೋಮ, ಅಮೃತ ಜ್ಯೋತಿ ಪ್ರಜ್ವಲನ, ವೇದಮಂತ್ರ ಪಠನ, ಸಾಧನಾ ಸಂಗಮ, 48 ದಿನಗಳ ಕಾಲ ನಡೆದ ಜ್ಞಾನಯಜ್ಞ ಮಂತ್ರದ ಸಮರ್ಪಣ, ಶ್ರೀ ಗುರು ಪಾದುಕಾ ಪೂಜೆ, ಅಭಿಷೇಕ, ಅರ್ಚನೆ, ಧ್ಯಾನ, ಪ್ರವಚನ, ಭಜನೆ, ಆರತಿ ನಡೆದು, ಬಳಿಕ ಭಕ್ತರು ಮಧ್ಯಾಹ್ನ ಮಹಾಪ್ರಸಾದ ಸ್ವೀಕರಿಸಿದರು. ಅಮ್ಮನ ಜನ್ಮ ದಿನದ ಅಂಗವಾಗಿ ಜಿಲ್ಲೆಯ ನೂರು ಕಡೆಗಳಲ್ಲಿ ಅಮಲ ಭಾರತ ಸ್ವತ್ಛತಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ವಿದ್ಯಾಲಯಂನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಜತೆಗೆ ವಿವಿಧ ಸೇವಾಕರ್ತರನ್ನು ಗೌರವಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next