Advertisement
ಜೂನ್ ತಿಂಗನಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಗೆ ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೊಡಿ ಹರಿಯಲು ಸನಿಹವಾಗಿವೆ.
Related Articles
Advertisement
ಅಂತರ್ಜಲ ವೃದ್ಧಿ: ಅಮಾನಿಬೈರಸಾಗರ ಕೆರೆ ತುಂಬಿ ಕೊಡಿ ಹರಿಯುವ ನೀರಿನಿಂದ ಸುಮಾರು ಸಣ್ಣ ಪುಟ್ಟ ಕೆರೆ ತುಂಬಿ, ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರು ವೃದ್ಧಿಯಾಗುತ್ತದೆ.
ಪ್ರವಾಸಿ ತಾಣವಾದ ಅಮಾನಿಭೈರಸಾಗರ: ಗುಡಿಬಂಡೆ ಬೆಂಗಳೂರಿನಿಂದ 95 ಕಿ.ಮೀ ದೂರದಲ್ಲಿದ್ದು, ಬೆಂಗಳೂರಿಗೆ 100 ಕಿ.ಮೀ ಅಂತರ ಒಳಗಿನ ಒಂದು ದಿನದ ಪ್ರವಾಸಕ್ಕೆ ನಂದಿ ನಂತರದ ಪ್ರವಾಸಿ ತಾಣವಾಗಿ ಗುಡಿಬಂಡೆ ತಾಲ್ಲೂಕಿನ ಸುರಸದ್ಮಗಿರಿ ಬೆಟ್ಟ, ಆವುಲಬೆಟ್ಟ, ಹಾಗೂ ಹತ್ತಿರದ ವಾಟದಹೊಸಹಳ್ಳಿ ಕೆರೆ ಹಾಗೂ ಅಮಾನಿಭೈರಸಾಗರ ಕೆರೆಯೂ ಸೇರ್ಪಡೆಗೊಂಡು, ವಾರಾಂತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗಳು ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಬೇಟಿ ನೀಡುತ್ತಿದ್ದಾರೆ.
ರೈತರಿಗಿಲ್ಲ ಉಪಯೋಗ: ಸುಮಾರು ಹತ್ತು-ಇಪ್ಪತ್ತು ವರ್ಷಗಳ ಹಿಂದೆ ಅಮಾನಿಬೈರ ಸಾಗರ ಕೆರೆ ತುಂಬಿದರೆ, ಕೆರೆಯ ನೀರನ್ನು ಕೆರೆ ಅಚ್ಚುಕಟ್ಟಿನ ರೈತರಿಗೆ ಬೆಳೆಗಳಿಗೆ ನೀರು ಬಿಡುತ್ತಿದ್ದರು, ಇದರಿಂದ ತಾಲ್ಲೂಕಿನ ಯಾವುದೇ ಕೆಲಸವಿಲ್ಲದ ಜನರಿಗೆ ಕೃಷಿಯಿಂದಾದರೂ ಒಂದಷ್ಟು ಅದಾಯ ಪಡೆಯಬಹುದಾಗಿದ್ದು, ಆದರೆ ಇತ್ತೀಚಿಗೆ ಇಲ್ಲಿನ ಅಧಿಕಾರಿ ವರ್ಗದವರ ಬೇಜಾವ್ದಾರಿ ತನದಿಂದ ಕೆರೆಯ ನೀರನ್ನು ಬೆಳೆಗಳಿಗೆ ಬಿಡದೆ ರೈತರಿಗೆ ಯಾವುದೇ ಉಪಯೋಗ ವಾಗುತ್ತಿಲ್ಲ.
ಕೊಡಿ ಹರಿದರೆ ಹಬ್ಬದ ವಾತವರಣ: ಅಮಾನಿಭೈರಸಾಗರ ಕೆರೆ ಮೇಲ್ಭಾಗದಿಂದ ಭಾರತದ ನಕ್ಷೆ ಹೋಲುವಂತಿದ್ದು, ಈ ಕೆರೆ ತುಂಬಿ ಕೊಡಿ ಹರಿದರೆ, ಕೊಡಿ ನೀರು ನಿಲ್ಲುವವರೆಗೂ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ನೀರು ನೆಂದು ತೇಲುತ್ತಾರೆ, ಸುಮಾರು ವರ್ಷಗಳ ಹಿಂದೆ ಕೊಡಿ ಹರಿದ ಕೆರೆ ಈ ಭಾರಿಯಾದರೂ ಕೊಡಿ ಹರಿಯುತ್ತಾದೆಯೇ ಎಂದು ಜನರು ಕಾದು ಕುಳಿತ್ತಿದ್ದಾರೆ.
-ನವೀನ್ ಕುಮಾರ್, ಗುಡಿಬಂಡೆ